ಕುಮಟಾ : ಹೆಗಡೆ ಗ್ರಾಮದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಜೀವದ ಹಂಗುತೊರೆದು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಧೀರೂ ಶಾನಭಾಗ ವೈಯಕ್ತಿಕವಾಗಿ ೧೦೦೦ ಪ್ರೋತ್ಸಾಹ ಧನ ಹಾಗೂ ಛತ್ರಿ ಮತ್ತು ಬ್ಯಾಗ್ ವಿತರಿಸಿದ್ದಾರೆ
ಈ ವೇಳೆ ಮಾತನಾಡಿದ ಅವರು ಸರ್ಕಾರ ಕೊಡುವ ಅಲ್ಪ ಗೌರವಧನದಲ್ಲಿ ಜೀವನ ಸಾಗಿಸುವ ಆಶಾ ಕಾರ್ಯಕರ್ತೆಯರು ತಮ್ಮ ಜೀವನ ಸಾಗಿಸಲು ಕಷ್ಟಪಡುತ್ತಿದ್ದಾರೆ ಆದ್ದರಿಂದ ನಮ್ಮ ತಂದೆ ತಾಯಿಯಾದ ಶಾಂತಾಬಾಯಿ ಹಾಗೂ ಶ್ರೀಧರ್ ಶಾನಭಾಗ್ ಹೆಸರಿನಲ್ಲಿ ಗೌರವಧನ ನೀಡಿದ್ದೇನೆ ಇನ್ನೂ ಶಾಸಕರು ಹಾಗೂ ಮಂತ್ರಿಗಳು ಆಶಾ ಕಾರ್ಯಕರ್ತೆಯರಿಗೆ ಕೇವಲ ಭಾಷಣದಲ್ಲಿ ಅಷ್ಟೇ ವೇತನ ಹೆಚ್ಚು ಮಾಡುತ್ತೇವೆ ಎಂದು ಪೊಕಳೆ ಬಿಡುತ್ತಾರೆ ಇನ್ನಾದರೂ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚು ಮಾಡಿ ಎಂದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಾಂತಾರಾಮ ನಾಯ್ಕ ಹಾಗೂ ಗ್ರಾಮ್ ಪಂಚಾಯತ್ ಸದಸ್ಯರಾದ ಮಂಜುನಾಥ್ ನಾಯ್ಕ. ಆಶಾ ನಾಯ್ಕ ಸುರೇಶ್ ಪಟಗಾರ ಹಾಗೂ ಹಲವರು ಇದ್ದರೂ
More Stories
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ
ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಡಿಕೆಶಿ ಘೋಷಣೆ