May 5, 2024

Bhavana Tv

Its Your Channel

ಹಿರೇಗುತ್ತಿ ವಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಹಸಿರು ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಬೀಜ ಬಿತ್ತನೆ ಅಭಿಯಾನ

ಹಿರೇಗುತ್ತಿ ವಲಯದ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಸಹಭಾಗಿತ್ವದೊಂದಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ವಿಶ್ವೇಶ್ ಎನ್ ಬಿ ಹಾಗೂ ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ಮತ್ತು ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನೀಲಕಂಠ ಎನ್ ನಾಯಕ. ಆರೋಗ್ಯ ಇಲಾಖೆಯ ಶುಶ್ರೂಷಕಿಯರು,ತಾಂತ್ರಿಕ ತಜ್ಞರು,ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಇತರೆ ಸಿಬ್ಬಂದಿಗಳು ಮತ್ತು ಶಿಕ್ಷಣ ಇಲಾಖೆಗೆ ಸಂಬAಧಿಸಿದAತೆ ಹಿರೇಗುತ್ತಿ ವಲಯದ ವ್ಯಾಪ್ತಿಯಲ್ಲಿ ಬರುವ ಕನ್ನಡ ಶಾಲೆಗಳಾದ ಹಿರೇಗುತ್ತಿ, ಬರ್ಗಿ, ನುಶಿಕೋಟೆ ಮತ್ತು ಕೋಳಿ ಮಂಜುಗುಣಿ ಯ ಶಿಕ್ಷಕರು ಹಾಗೂ ಸಾರ್ವಜನಿಕರೊಂದಿಗೆ ಹಿರೇಗುತ್ತಿ ವಲಯದ ಅಧಿಕಾರಿವರ್ಗದವರು ಮತ್ತು ಎಲ್ಲ ಸಿಬ್ಬಂದಿಗಳ ಸಮಕ್ಷಮದಲ್ಲಿ ಒಟ್ಟು 5 ಕೆಜಿಯ 6 ವಿವಿಧ ಜಾತಿಯ ಅರಣ್ಯ ಬೀಜಗಳನ್ನು ಬಿತ್ತನೆ ಮಾಡಿ 2022 ನೇ ಸಾಲಿನ ಬೀಜ ಬಿತ್ತುವ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಡಿವೈಆರ್ ಎಫ್ ಓ ಪ್ರದೀಪ ನಾಯ್ಕ. ಮಂಜುನಾಥ ಪಟಗಾರ. ಹರೀಶ ಗೊರವರ್ .ಪೊರಸ್ಟ್ ಗಾರ್ಡ ಪವನ್ ನಾಯಕ.ಲಕ್ಷಣ ನಾಯ್ಕ ಉಪಸ್ಥಿತರಿದ್ದರು

error: