April 24, 2024

Bhavana Tv

Its Your Channel

ಆಭರಣ ಕಳ್ಳತನ: ಬಾಲಾಪರಾಧಿಯ ಸಮೇತ ಆಭರಣ ವಶಕ್ಕೆ

ಕುಮಟಾ: ಕಳೆದ 5 ದಿನಗಳ ಹಿಂದೆ ಮನೆಯ ಬಾಗಿಲಿನ ಬೀಗ ಮುರಿದು ಒಳಗೆ ನುಗ್ಗಿ ಕಳ್ಳತನ ನಡೆಸಿದ್ದ ಬಾಲಾಪರಾಧಿಯನ್ನು ಕುಮಟಾ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪರಾಧಿಯಿಂದ 103 ಗ್ರಾ ತೂಕದ ಒಟ್ಟು 5.15 ಲಕ್ಷ ರು. ಮೌಲ್ಯದ ಬಂಗಾರದ ಆಭರಣಗಳನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತಾಲೂಕಿನ ಮಿರ್ಜಾನ ಸಮೀಪದ ಬಾಲಾಪರಾಧಿಯು ಕೋಡ್ಕಣಿ, ಗ್ರಾಮದ ಹಳಗೇರಿ, ಕೇರಿಯ ರಮೇಶ ವಾಸುದೇವ ನಾಯ್ಕ ಎಂಬುವವರ ಮನೆಗೆ ನುಗ್ಗಿ ಮನೆಯೊಳಗೆ ಯಾರೂ ಇಲ್ಲದ ಸಂದರ್ಭದಲ್ಲಿ ಬಂಗಾರದ ಸರ, ದೊಡ್ಡ ಬಳೆ, ಚಿಕ್ಕ ಬಳೆಯನ್ನು ಕಳ್ಳತನ ಮಾಡಿದ್ದನು. ಈ ಬಗ್ಗೆ ಮಾಹಿತಿ ಪಡೆದ ಕುಮಟಾ ಪೋಲಿಸರು ತನಿಖೆ ನಡೆಸಿ, ಬಾಲಾಪರಾಧಿಯನ್ನು ಆಭರಣಗಳ ಸಮೇತ ವಶಕ್ಕೆ ಪಡೆದಿದ್ದಾರೆ.

error: