ಕುಮಟಾ: ಆರ್ಥಿಕವಾಗಿ ಹಿಂದುಳಿದರೂ ಕೂಲಿ ಕಾರ್ಮಿಕರೊಬ್ಬರ ಪುತ್ರ ವೈದ್ಯಕೀಯ ಶಿಕ್ಷಣ ಮುಗಿಸಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ದಿನಕರ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.
ಅವರು ಎಂ.ಬಿ.ಬಿ.ಎಸ್ ಶಿಕ್ಷಣ ಮುಗಿಸಿದ ಡಾ.ಸುದರ್ಶನ ಪಟಗಾರ ಅವರಿಗೆ ಹೀರೆಗುತ್ತಿಯ ಮಹಾಲಕ್ಷ್ಮಿ ರವಳನಾಥ ದೇವಸ್ಥಾನದಲ್ಲಿ ಊರ ನಾಗರಿಕರು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಉನ್ನತ ಶಿಕ್ಷಣ ಕೆಲವೇ ವರ್ಗಗಳಿಗೆ ಸೀಮಿತವಾಗದೆ ಎಲ್ಲಾ ಸಮುದಾಯದವರು ಕೂಡ ಶೈಕ್ಷಣಿಕವಾಗಿ ಸಾಧನೆ ಮಾಡಿ ಯಶಸ್ಸು ಪಡೆಯುತ್ತಿರುವುದು ಪ್ರಶಂಸಾರ್ಹ ಬೆಳವಣಿಗೆಯಾಗಿದೆ. ವೈದ್ಯಕೀಯ ವೃತ್ತಿ ಎಲ್ಲದಕ್ಕಿಂತ ಮಹತ್ವದ್ದಾಗಿದ್ದು ಅನೇಕ ವೈದ್ಯರು ಜನರ ಪಾಲಿಗೆ ದೇವರಾಗಿ ಕಾಣುತ್ತಾರೆ ಎನ್ನುವುದು ಅತಿಶಯೋಕ್ತಿ ಎನಿಸದು. ಡಾ.ಸುದರ್ಶನ್ ಅವರ ಮುಂದಿನ ಶಿಕ್ಷಣಕ್ಕೆ ಆರ್ಥಿಕ ಸಹಾಯ ಕೂಡ ಅಗತ್ಯವಿದ್ದು ಸಮಾಜದ ದಾನಿಗಳ ಸಹಕಾರ ಮುಖ್ಯವಾಗುತ್ತದೆ ಎಂದು ಹೇಳಿದರು.
ಶಾಸಕರು ಹಾಗೂ ಊರಿನ ಮುಖಂಡರು ಡಾ.ಸುದರ್ಶನ ಅವರನ್ನು ಸನ್ಮಾನಿಸಿ ಗೌರವಿಸಿದರು. ನೀಲಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಪ್ರೇಮಾನಂದ ಗಾಂವಕರ, ನಿವೃತ್ತ ಹೆಸ್ಕಾಂ ಅಧಿಕಾರಿ ಆರ್. ಎನ್.ಪಟಗಾರ, ಶಿಕ್ಷಕ ಆರ್. ಪಿ.ಪಟಗಾರ, ಊರಿನ ಮುಖಂಡ ಎಸ್.ಎಲ್.ಶಾನಭಾಗ ಇದ್ದರು.
More Stories
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ
ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಡಿಕೆಶಿ ಘೋಷಣೆ