May 19, 2024

Bhavana Tv

Its Your Channel

ಮನವಿ ನೀಡಿದ ಒಂದೇ ಗಂಟೆಯೊಳಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ

ಕುಮಟಾ ತಾಲ್ಲೂಕಿನ ನುಷಿಕೋಟೆಯ ಹರಿಕಂತ್ರ ಕೇರಿಯ ಸುಮಾರು ಒಂದು ಕಿಲೋಮೀಟರ್ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಬೇಕು ಎಂದು ಗ್ರಾಮಸ್ಥರು ಭಾನುವಾರ ಮನವಿ ಮಾಡಿಕೊಂಡ ಒಂದೇ ಗಂಟೆಯೊಳಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಅವರು ನಡಿಗೆಯಲ್ಲಿ ಸಾಗಿ ವಸ್ತುಸ್ಥಿತಿ ವೀಕ್ಷಿಸಿದರು. ನಂತರ ಮಾತನಾಡಿ ಇಲ್ಲಿನ ಶಾಶ್ವತ ರಸ್ತೆಗೆ ಸಣ್ಣ ಮೊತ್ತದ ಅನುದಾನ ಸಾಲದ ಕಾರಣ ಪಿಎಂಜಿಎಸ್‌ವೈ ಯೋಜನೆಯಿಂದ ಹಣ ಮಂಜೂರು ಮಾಡಿಸುವ ಬಗ್ಗೆ ಭರವಸೆ ನೀಡಿದರು. ಮಳೆಗಾಲದ ಸನ್ನಿವೇಶಗಳನ್ನು ಗಮನಿಸಿ ಪ್ರಶಸ್ತ ಸಮಯದಲ್ಲಿ ರಸ್ತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಸ್ಥಳೀಯರು ಶಸಕರು ಸ್ಪಂದಿಸಿದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

error: