ಮುರ್ಡೇಶ್ವರ ಬೀನಾ ವೈದ್ಯ ಡಿಗ್ರಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರದಂದು ಬೀನಾ ವಾಲಿಬಾಲ್ ಲೀಗ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪಂದ್ಯಾವಳಿಯನ್ನು ಭಟ್ಕಳದ ಡಿ.ಎಸ್.ಪಿ, ಬೆಳ್ಳಿಯಪ್ಪರವರು ಉದ್ಘಾಟಿಸಿದರು, ಉದ್ಘಾಟಕರಾದ ಬೆಳ್ಳಿಯಪ್ಪರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿಯುತ್ತಾ ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಪರಿಪೂರ್ಣತೆಯನ್ನು ಸಾಧಿಸಿ ಸಮಾಜದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಗಳತ್ತಾ ಗಮನ ಕೊಡದಿರಿ. ಅವೆಲ್ಲ ನಿಮ್ಮ ವಯಸ್ಸಿಗೆ ಮೀರಿದ ಚಟುವಟಿಕೆಗಳು, ಒಳ್ಳೆಯ ಸಾಧನೆ ಮಾಡಿ ಸಮಾಜದಲ್ಲಿ ಹೆಸರುಗಳಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮಂಕಾಳ್ ಎಸ್ ವೈದ್ಯವರು ಮಾತನಾಡಿ ಗೆದ್ದವರಿಗಿಂತ ಸೋತವರ ಅನುಭವ ಜಾಸ್ತಿ ಎಕೆಂದರೆ ನಾವು ಎಲ್ಲಿ ಸೋತೆವು , ಹೇಗೆ ಸೋತೆವು ಏನನ್ನು ಮಾಡಿದರೆ ಯಶಸ್ಸನ್ನು ಗಳಿಸುತ್ತೇವೆ ಎಂದು ತಿಳಿದುಕೊಂಡಾಗ ನಾವು ಯಶಸ್ಸನ್ನು ಗಳಿಸಿ ಗೆಲ್ಲಲು ಸಾಧ್ಯವಾಗುತ್ತದೆ. ನಾವು ಶಾಲೆಗೆ ಬಂದಿರುವುದು ಜ್ಞಾನವನ್ನು ಗಳಿಸಲು ನಮ್ಮನ್ನು ನಾವು ರೂಪಿಸಿಕೊಳ್ಳಲು ಆದ್ದರಿಂದ ಸರಿಯಾದ ನಿರ್ಧಾರವನ್ನು ತೆಗೆದುಕೊಂಡು ಒಳ್ಳೆಯ ವ್ಯಕ್ತಿಗಳಾಗಿ ವಿದ್ಯಾರ್ಥಿಗಳ ಸಾಧನೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ನಮ್ಮ ಸಂಸ್ಥೆಯು ಮಾಡಿಕೊಡುತ್ತದೆ ಅದರ ಸದುಪಯೋಗಪಡಿಸಿಕೊಳ್ಳಿ ಎಂದರು.
ಮುಖ್ಯ ಅತಿಥಿಯಾಗಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿದೇಶಕರಾದ ಪುಷ್ಪಲತಾ ವೈದ್ಯವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ವಿಠ್ಠಲ್ ನಾಯ್ಕ ರವರು ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅಶ್ವಿನಿ ನಾಯ್ಕ ಹಾಗೂ ಸಹನಾ ಮೊಗೇರ ಕಾರ್ಯಕ್ರಮ ನಿರೂಪಿಸಿದರು. ಧರಣಿ ಭಟ್ ಎಲ್ಲರನ್ನು ವಂದಿಸಿದರು.
More Stories
ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಒಲಿಂಪಿಯಾಡ ಪದಕ ವಿತರಣ ಸಮಾರಂಭ:
ಮುರ್ಡೇಶ್ವರದಲ್ಲಿ ಗ್ರಾಮೀಣ ಮಹಿಳಾ ದಿನಾಚರಣೆ- 2024
ಅತ್ಯಂತ ಯಶಸ್ವೀಯಾಗಿ ನಡೆದ ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ಸಿಪ್ ಕಾರ್ಯಕ್ರಮ: