May 3, 2024

Bhavana Tv

Its Your Channel

ರಸ್ತೆ ನಿರ್ಮಾಣ ಹಂತದಲ್ಲಿರುವ ಶಿರಸಿ- ಕುಮಟ ರಸ್ತೆಯು ಭಾರಿ ಮಳೆಯಿಂದ ಸುವ್ಯವಸ್ಥೆ ; ವಾಹನ ಸಂಚಾರಕ್ಕೆ ವ್ಯಥೆ

ಸಿರಸಿ:- ಹೊಸ ರಸ್ತೆ ನಿರ್ಮಾಣ ಹಂತದಲ್ಲಿರುವ ಶಿರಸಿ- ಕುಮಟ ರಸ್ತೆಯು ಇತ್ತೀಚಿನ ಒಂದೆರಡು ದಿನಗಳ ಭಾರಿ ಮಳೆಯಿಂದ ಸುವ್ಯವಸ್ಥೆ ವಾಹನ ಸಂಚಾರಕ್ಕೆ ವ್ಯಥೆ ಉಂಟಾಗುವ ಪ್ರಕರಣಗಳು ಇಂದು ಜರುಗಿದವು.
ಬಂಡಲ ಗ್ರಾಮಕ್ಕಿಂತ ಹಿಂದೆ ಹೊಸದಾಗಿ ನಿರ್ಮಿಸುತ್ತಿರುವ ಕಿರುಸೇತುವೆ ಪಕ್ಕದಲ್ಲಿ ಮಣ್ಣು ಹುಗಿದು, ವಾಹನ ಸಂಚಾರಕ್ಕೆ ವ್ಯಥೆ ಉಂಟಾಗಿ, ಗುತ್ತಿಗೆದಾರರು ತಾತ್ಪೂರ್ತಿಕವಾಗಿ ಜಲ್ಲಿ ರಿಪೇರಿ ಜರುಗಿಸಿದ್ದು ಸುಮಾರು ಅರ್ಧತಾಸಿನಷ್ಟು ವಾಹನ ಸಂಚಾರಕ್ಕೆ ವ್ಯಥೆ ಉಂಟಾಗುವ ಪ್ರಸಂಗಗಳು ಇಂದು ಮುಂಜಾನೆ 10:00 ಗಂಟೆ ಸುಮಾರಿಗೆ ಜರುಗಿದ್ದು, ಶಿರಸಿಯಿಂದ ಕೊಳಗಿಬೀಸನ ನಂತರ ಹಿಂದಿನ ರಸ್ತೆಗೆ ಹಾಕಿರುವಂತಹ ಮಣ್ಣುಗಳು ಸಂಪೂರ್ಣ ಭಾರಿ ಮಳೆಯಿಂದ ತೊಳೆದು ಹೋಗಿದ್ದು, ರಸ್ತೆ ತುಂಬಾ ಹೊಂಡಗಳಿAದ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟಾಗಿದ್ದು ಇರುತ್ತದೆ.
ಪ್ರಸಕ್ತ ವರ್ಷದ ಮಳೆಗಾಲದ ಮುಂದಿನ ಅವಧಿಯಲ್ಲಿ ಹೊಸ ರಸ್ತೆಯ ಕಾಮಗಾರಿಯೊಂದಿಗೆ ಸುರುಳೀತವಾಗಿ ವಾಹನ ಸಂಚಾರಕ್ಕೆ ಅನಾನುಕೂಲವಾಗದ ರೀತಿಯಲ್ಲಿ ಕಾರ್ಯ ಜರುಗಿಸುವುದು ಅವಶ್ಯ. ಎಂಬ ಅಭಿಪ್ರಾಯ ಕೇಳಿಬಂದವು.

error: