ಶಿರಸಿ: ಇದೊಂದು ಶಿರಸಿ ತಾಲೂಕ, ದೇವನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಪುಟ್ಟ ಹಳ್ಳಿ. ಹೆಸರು ಬೆಣಗಾಂವ ಗ್ರಾಮದ ನೀಡಗೋಡ. ಓಡಾಡಲು ಮೂಲಭೂತ ಸೌಕರ್ಯವಾದ ರಸ್ತೆ ಮತ್ತು ಕಾಲುಸಂಕ ವ ಸೇತುವೆ ವಂಚಿತ ಹಳ್ಳಿ. ಗ್ರಾಮಸ್ಥರು ಪ್ರತಿವರ್ಷ ತಮ್ಮ ಅನುಕೂಲಕ್ಕೆ ಶೀಥಲ ವ್ಯವಸ್ಥೆಯಲ್ಲಿರುವ ನೀರುಕಾಲುವೆ ದುರಸ್ಥಿ ಮಾಡಿಕೊಂಡು ಓಡಾಡುವ ಪ್ರವೃತ್ತಿ ಮಾಡಿಕೊಳ್ಳುತ್ತಿರುವುದು ವಿಶೇಷ.
ರಸ್ತೆ ಮತ್ತು ಸಮರ್ಪಕ ನೀರುಕಾಲುವೆ ಕಾಲುಸಂಕದ ಅನಾನೂಕೂಲದಿಂದ ಪ್ರತಿವರ್ಷ 5- 6 ಗ್ರಾಮಸ್ಥರು ದ್ವೀಚಕ್ರ ವಾಹನದಿಂದ ಬಿದ್ದಿರುವಂತಹ ಪಟ್ಟಿಯಲ್ಲಿ ಸಾಕಷ್ಟು ಹೆಸರು ಸೇರಲ್ಪಟ್ಟಿದೆ. ಅದರಂತೆ, ಅಸಮರ್ಪಕ ರಸ್ತೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ
ವೇದಿಕೆಯ ಆಶ್ರಯದಲ್ಲಿ ದಿ. 29 ರಂದು ದೇವನಳ್ಳಿಯಲ್ಲಿ “ಹಳ್ಳಿ ಕಡೆ ನಡಿಗೆ” ನಡೆದ ರಾತ್ರಿಯೇ ಇನ್ನೊಂದು ಘಟನೆ ಜರುಗಿರುವುದು ಖೇದಕರ.
ಬೆಣಗಾಂವ ಗ್ರಾಮದ, ನೀಡಗೋಡ ಹಳ್ಳಿಯ ಈಶ್ವರ ಮರಾಠಿ ಅಸಮರ್ಪಕ ರಸ್ತೆಯಲ್ಲಿ ದ್ವೀಚಕ್ರ ವಾಹನ ಓಡಿಸುವ ಸಂದರ್ಭದಲ್ಲಿ ವಾಹನದಿಂದ ಬಿದ್ದು ಬಲತೊಡೆಯ ಮಾಂಸಖAಡ ಮತ್ತು ನರಕ್ಕೆ ತೀವ್ರ ಗಾಯಪಟ್ಟಿರುವುದು ದುಖಃಕರ ಸಂಗತಿ. ಗಾಯಕ್ಕೆ ಒಳಪಟ್ಟಿರುವ
ಈಶ್ವರನ ಸಹೋದರ ದತ್ತಾತ್ರೇಯ ಮರಾಠಿ ಕೊರಕಲು ರಸ್ತೆಯಿಂದ ವಾಹನಗಳನ್ನ ಚಲಾಯಿಸುವುದೇ ಕಷ್ಟಕರವಾಗಿದೆ. ಕೊರಕಲು ರಸ್ತೆಯಿಂದ ಇಂತಹ ಘಟನೆ ಮರುಕಳಿಸುತ್ತಾ ಇದ್ದಾಗಲೂ ಸೌಕರ್ಯ ಒದಗಿಸದೇ ಇರುವುದು ಖೇದಕರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ತೀವ್ರ ಆಕ್ರೋಶ:
ರಸ್ತೆ, ಸೇತುವೆ, ಕಾಲುಸಂಕ ಮುಂತಾದ ಮೂಲಭೂತ ಸೌಲಭ್ಯಗಳಿಂದ ಗ್ರಾಮ ಪಂಚಾಯತ ಹೇಚ್ಚಿನ ಹಳ್ಳಿಗಳು ವಂಚಿತವಾಗಿರುವುದು ಹಾಗೂ ಈ ದಿಶೆಯಲ್ಲಿ ಸಮರ್ಪಕ ಕಾರ್ಯ ಜರುಗಿಸದೇ ಇರುವುದಕ್ಕೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
More Stories
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ
ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ? ಡಾ.ಅಂಜಲಿ ಪ್ರಶ್ನೆ