May 3, 2024

Bhavana Tv

Its Your Channel

ಬನವಾಸಿ ಹೆಸ್ಕಾಂ ಶಾಖೆಗೆ ಖಾಯಂ ಕಿರಿಯ ಇಂಜಿನಿಯರ ವರ್ಗಾವಣೆ ಮಾಡಿ ಆದೇಶ

ವರದಿ: ವೇಣುಗೋಪಾಲ ಮದ್ಗುಣಿ

ಸಿರ್ಸಿ : ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ಬನವಾಸಿ ಹೆಸ್ಕಾಂನಲ್ಲಿ ಶಾಖಾಧಿಕಾರಿ ವರ್ಗಾವಣೆಗೊಂಡು ವರ್ಷಗಳೆ ಕಳೆದು ಹೋಗಿತ್ತು. ಸದ್ಯ ಅಲ್ಲಿಯೆ ಇದ್ದ ಸಿಬ್ಬಂದಿಗೆ ಚಾರ್ಜ್ ನ್ನು ನೀಡಿ ಕೆಲಸವನ್ನು ಮಾಡಿಸುತ್ತಿದ್ದರು. ಇದನ್ನು ಮನಗೊಂಡು ಇಂಧನ ಸಚಿವರು,ಸರ್ಕಾರದ ಆಧೀನ ಕಾರ್ಯದರ್ಶಿ ಇಂಧನ ಇಲಾಖೆ ಬೆಂಗಳೂರವರು ಬನವಾಸಿ ಶಾಖೆಗೆ ಖಾಯಂ ಆಗಿ ಕಿರಿಯ ಇಂಜಿನಿಯರೊಬ್ಬರನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಶಾಖೆಯಲ್ಲಿ ಖಾಯಂ ಆಗಿ ಅನುಭವವಿರುವ ಶಾಖಾಧಿಕಾರಿಗಳಿದ್ದರೆ ತ್ವರಿತವಾಗಿ,ಕೆಲಸ ಸುಲಭವಾಗಿ ಹಾಗೂ ಕಾರ್ಯ ಕ್ಷಮತೆಯಿಂದ ಕೂಡಿರುತ್ತದೆ. ಈಗಾಗಲೇ ಯಾದವ ಬೋರಕರವರು ಮೂರು ದಿನಗಳಿಂದ ಕೆಲಸಕ್ಕೆ ಹಾಜರಾಗಿ ಗ್ರಾಮ ಸಭೆಗೆ ಭಾಗವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಖಾಯಂ ಕಿರಿಯ ಇಂಜಿನಿಯರನ್ನು ನೇಮಕ ಮಾಡಿದ ಬಗ್ಗೆ ಸಚಿವ ಶಿವರಾಮ ಹೆಬ್ಬಾರ,ಇಂಧನ ಸಚಿವರಾದ ಸುನೀಲ್ ಕುಮಾರ್, ಉಸ್ತುವಾರಿ ಸಚಿವರಾದ ಕೊಟಾ ಶ್ರೀನಿವಾಸ ಪೂಜಾರಿಯವರಿಗೆ ಗ್ರಾಮಸ್ಥರು, ಪಂಚಾಯತ ಸದಸ್ಯರುಗಳು, ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

error: