April 25, 2024

Bhavana Tv

Its Your Channel

ಶಿರಸಿಯಲ್ಲಿ ಅರಣ್ಯವಾಸಿಗಳ ಬೃಹತ್ ಮಹಾ ಸಂಗ್ರಾಮ ರ‍್ಯಾಲಿ ;ಅರಣ್ಯ ಇಲಾಖೆ ಐದು ಅಂಶದ ಒಡಂಬಡಿಕೆ ಪತ್ರಕ್ಕೆ ಲಿಖಿತ ಉತ್ತರ ನೀಡಲು ಇನ್ಕರ್.

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳ ಬೃಹತ್ ಮಹಾಸಂಗ್ರಾಮದಲ್ಲಿ ಆರು ಸಾವಿರಕ್ಕಿಂತ ಮಿಕ್ಕಿ ಅತಿಕ್ರಮಣದಾರರ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ಜರುಗಿ,ಅರಣ್ಯ ಇಲಾಖೆಗೆ ಐದು ಅಂಶದ ಒಡಂಬಡಿಕೆ ಪತ್ರ ರವಾನಿಸಿದ ಘಟನೆ ಜರುಗಿದವು. ಸಿ.ಸಿ.ಎಫ್ ಆಗಮನಕ್ಕಾಗಿ ಮೂರು ತಾಸು ಮಿಕ್ಕಿ ಪ್ರತಿಭಟನಾಕಾರರು ಡಿ.ಎಫ್.ಓ ಕಚೇರಿಯಲ್ಲಿಧರಣಿ ಕಾರ್ಯಕ್ರಮ ಜರುಗಿಸಿದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಜರುಗಿದ ಅರಣ್ಯವಾಸಿಗಳ ಮಹಾ ಸಂಗ್ರಾಮವು ಬಿಡ್ಕಿಬೈಲಿನ ಗಾಂಧಿ ಪ್ರತಿಮೆ ಏದುರಿನಿಂದ ಪ್ರಾರಂಭಗೊAಡು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ,
ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯವರೆಗೆ ಜಿಲ್ಲಾದ್ಯಂತ ಆಗಮಿಸಿದ ಬೃಹತ್‌ಸಂಖ್ಯೆಯ ಅರಣ್ಯವಾಸಿಗಳು ಭಾಗವಹಿಸಿದ್ದುವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಇಬ್ರಾಹಿಂ ಗೌಡಳ್ಳಿ, ಎಮ್ ಆರ್ ನಾಯ್ಕ ಕಂಡ್ರಾಜಿ, ದೇವರಾಜ ಮರಾಠಿ, ರಾಮ ಮರಾಠಿ, ಲಕ್ಷö್ಮಣ ಮಾಳ್ಳಕ್ಕನವರ, ವಿನೋಧ ಯಲಕೊಟಗಿ, ಭಿಮ್ಸಿ ವಾಲ್ಮೀಕಿ, ಮಂಜುನಾಥ ಮರಾಠಿ, ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ನಾಗರಾಜ ಮರಾಠಿ ಕೋಡಿಗದ್ದೆ, ದಿನೇಶ್ ನಾಯ್ಕ, ನೇಹರೂ ನಾಯ್ಕ ಬಿಳೂರು, ಸುನೀಲ್‌ನಾಯ್ಕ ಸಂಪಖAಡ, ವಿನಾಯಕ ಮರಾಠಿ, ದಿಲೀಪ್ ಜೊಯಿಡಾ, ಸಾರಂಬಿ ಬೇಟ್ಕುಳಿ, ಯಾಕೂಬ ಸಾಬ್, ಪಾಂಡುರAಗ ನಾಯ್ಕ ಬೆಳಕೆ, ತಂಜೀಮ್ ಅಧ್ಯಕ್ಷರು ಇನಾಯತ್ ಸಾಬಂದ್ರಿ, ಗಣೇಶ ರಾಮಾಪುರ ಮುಂತಾದ ಪ್ರಮುಖರು ಭಾಗವಹಿಸಿದ್ದರು.

ಐದು ಅಂಶದ ಒಡಂಬಡಿಕೆ ಪತ್ರ:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಅಧಿಭೋಗ ಮತ್ತು ಸಾಗುವಳಿ ಕ್ಷೇತ್ರಕ್ಕೆ ಒಕ್ಕಲೆಬ್ಬಿಸಬಾರದು ಮತ್ತು ಆತಂಕ ಪಡಿಸಬಾರದು, ಒಕ್ಕಲೆಬ್ಬಿಸುವ ಪೂರ್ವ ಕರ್ನಾಟಕ ಅರಣ್ಯ ಕಾಯಿದೆ ಕಲಂ 64 ಎ ಪ್ರಕ್ರೀಯೆ ಜರುಗಿಸುವುದು, ಅರಣ್ಯವಾಸಿಯ ಸಾಗುವಳಿಗೆ ಮತ್ತು ಮೂಲಭೂತ ಸೌಕರ್ಯಕ್ಕೆ ಆತಂಕಪಡಿಬಾರದು, ಅರಣ್ಯವಾಸಿಗಳ ಮೇಲೆ ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳ ನೀಡಬಾರದು, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದವರ ಮೇಲೆ ಜರಗುತ್ತಿರುವ ಒಕ್ಕಲೆಬ್ಬಿಸುವ ಪ್ರಕ್ರೀಯೆ ತಕ್ಷಣ ಸ್ಥಗಿತಗೊಳಿಸುವುದು ಎಂಬ ಐದು ಅಂಶದ ಒಡಂಬಡಿಕೆ ಪತ್ರಅರಣ್ಯ ಇಲಾಖೆಗೆ ರವಾನಿಸಲಾಯಿತು.

ಲಿಖಿತ ಉತ್ತರ ನೀಡಲು ಹೋರಾಟಗಾರರು ಪಟ್ಟು ಹಿಡಿದಾಗಲೂ, ಕಾಲಾವಕಾಶ ಡಿ.ಎಫ್.ಓ ಅಜ್ಜಯ್ಯ ಕೋರಿದಾಗ ಪ್ರತಿಭಟನಾಕಾರರು ಧರಣಿ ಅಂತ್ಯಗೊಳಿಸಿ ಮುಖ್ಯಮಂತ್ರಿ ಭೇಟಿಗೆ ಬನವಾಸಿ ಪಾದಯಾತ್ರೆಪ್ರಾರಂಭಿಸಿದರು.

ಅರಣ್ಯವಾಸಿಗಳ ಮುಖ್ಯಮಂತ್ರಿ ಭೇಟಿಗಾಗಿ ಬನವಾಸಿ ಪಾದಯಾತ್ರೆ-ಪೋಲೀಸರಿಂದ ನಿರ್ಭಂದ:
ಅರಣ್ಯವಾಸಿಗಳ ಸಮಸ್ಯೆಗಳಿಗೆ ಸರಕಾರ ಗಮನ ಹರಿಸುವ ಉದ್ದೇಶದಿಂದ ಶಿರಸಿಯಿಂದ ಬನವಾಸಿವರೆಗೆ ಹಮ್ಮಿಕೊಳ್ಳಲಾದ ಪಾದಯಾತ್ರೆಗೆ ಪೋಲೀಸರು ಮಾರಿಕಾಂಬ ದೇವಾಲಯದ ಏದುರು ನಿರ್ಭಂದಿಸಿರುವ ಹಿನ್ನೆಲೆಯಲ್ಲಿ ಪಾದಯಾತ್ರೆಮೊಟಕುಗೊಳಿಸುವ ಸಂದರ್ಭ ಜರುಗಿತು.
ಮುಖ್ಯಮಂತ್ರಿ ಭೇಟಿಗೆ ಬನವಾಸಿ ಹೊಗುವ ಕುರಿತು ಪೋಲೀಸರು ನಿರ್ಭಂದಿಸಿದ ಸಂದರ್ಭದಲ್ಲಿ ಪ್ರತಿಭಟನಕಾರರೊಂದಿಗೆ ತೀವ್ರ ಮಾತಿನ ಚಕಮಕಿ ಜರುಗಿ ನಿಯೋಗದಿಂದ ಮುಖ್ಯಮಂತ್ರಿ ಭೇಟಿಗೆ ಕೊಟ್ಟಿರುವ ಅವಕಾಶವನ್ನ ಹೋರಾಟಗಾರರು ತೀರಸ್ಕರಿಸಿ ಪಾದಯತ್ರೆ ಮೊಟಕುಗೊಳಿಸಿದರು.

error: