May 6, 2024

Bhavana Tv

Its Your Channel

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪೊಲೀಸ್ ಠಾಣೆಯಲ್ಲಿ ರಥಸಪ್ತಮಿಯ ಪ್ರಯುಕ್ತ ಠಾಣೆ ಆವಾರದಲ್ಲಿ ಪತಂಜಲಿ ಯೋಗ ಸಮಿತಿಯಿಂದ ತರಬೇತಿ ಶಿಬಿರ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:- ಜನಸ್ನೇಹಿ ಪೊಲೀಸ್ ಠಾಣೆಯಾಗಿ ಹೊಸ ವಿನ್ಯಾಸದೊಂದಿಗೆ ರೂಪುಗೊಂಡ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ರಥಸಪ್ತಮಿಯ ಪ್ರಯುಕ್ತ ವಿಶೇಷ ಸೂರ್ಯನಮಸ್ಕಾರ ಮತ್ತು ಯೋಗ ತರಬೇತಿ ಕಾರ್ಯಕ್ರಮವನ್ನು ಪೋಲಿಸ ವೃತ್ತ ನಿರೀಕ್ಷಕರಾದ ಸುರೇಶ್ ಯಳ್ಳೂರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಪತಂಜಲಿ ಯುವ ಭಾರತ ಪ್ರಭಾರಿ ಶಿಕ್ಷಕ ದಿವಾಕರ ಮರಾಠಿ ಪತಂಜಲಿ ಯೋಗ ವಿಸ್ತಾರ ಶಿಕ್ಷಕ ಸುಬ್ರಾಯ ಭಟ್ಟ ಹಾಗೂ ಉಪ ಪೋಲಿಸ್ ನಿರೀಕ್ಷಕರಾದ ಮಂಜುನಾಥ ಗೌಡರ,ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಯೋಗ ತರಬೇತಿಯನ್ನು ಪಡೆದರು.

error: