April 28, 2024

Bhavana Tv

Its Your Channel

ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ

ಯಲ್ಲಾಪುರ : ಹೆಸ್ಕಾಂ ಯಲ್ಲಾಪುರ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಇಂಜಿನಿಯರ್ ಮಂಜುಳಾ ಮೇಡಂರವರು ಮಂಡ್ಯಕ್ಕೆ ವರ್ಗಾವಣೆ ಆದ ಪ್ರಯುಕ್ತ ಹೆಸ್ಕಾಂ ಉಪವಿಭಾಗದ ನೌಕರರು ಹಾಗೂ ವಿದ್ಯುತ್ ಗುತ್ತಿಗೆದಾರರಿಂದ ಬೀಳ್ಕೊಡುಗೆ ಸಮಾರಂಭ ಯಲ್ಲಾಪುರ ಉಪವಿಭಾಗದ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಾಯಕ ಪೇಟಕರ ಮಾತನಾಡಿ ಬೇರೆ ಯಾರನ್ನು ಈ ಜಾಗಕ್ಕೆ ಹಾಕದೆ ಇದ್ದರೂ, ಬದಲಿ ವ್ಯವಸ್ಥೆ ಇಲ್ಲದೇ ಬಿಡುಗಡೆ ಮಾಡುವುದು ಕಷ್ಟಕರವಾದರೂ ಮಾನವೀಯತೆಯಿಂದ ಅವರನ್ನು ಇಲ್ಲಿಂದ ಬಿಡುಗಡೆ ಮಾಡಿದ್ದೇನೆ.
ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ ಮಾತನಾಡಿ ನೌಕರರು ವರ್ಗವಾಗಿ ಹೋಗುವುದು ಸಹಜ ಪ್ರಕ್ರಿಯೆ ಆದರೆ ಸೇವೆಯಲ್ಲಿ ಇದ್ದಾಗ ಸಾರ್ವಜನಿಕರಿಗೆ, ಸಿಬ್ಬಂದಿಗಳಿಗೆ ಹೊಂದಿಕೊAಡು ಹೋಗುವುದು ಮುಖ್ಯ ಈ ನಿಟ್ಟಿನಲ್ಲಿ ಮಂಜುಳಾರವರು ಎಲ್ಲರ ಮನವನ್ನು ಗೆದ್ದಿದ್ದರು ಎಂದರು. ನೌಕರ ಸಂಘದ ಅಧ್ಯಕ್ಷರಾದ ಶೇಖರ್, ಕಾರ್ಯದರ್ಶಿ ಛಾಯಪ್ಪ ಮುರಡಿ,ಸಹಾಯಕ ಲೆಕ್ಕಾಧಿಕಾರಿ ವಿನಾಯಕ ಶೇಟ್,ನಗರ ಶಾಖಾಧಿಕಾರಿ ರಮಾಕಾಂತ ನಾಯ್ಕ, ಗ್ರಾಮೀಣ ಶಾಖಾಧಿಕಾರಿ ಲಕ್ಷ್ಮಣ ಜೋಗಳೇಕರ, ನಿವೃತ್ತ ಹೆಸ್ಕಾಂ ನೌಕರರಾದ ದಿನಕರ ಪಾಲೇಕರ್, ವಿದ್ಯುತ್ ಗುತ್ತಿಗೆದಾರ ಸಂಘದ ಕಾರ್ಯದರ್ಶಿ ಎಂ.ಎAಶೇಖ, ಗುತ್ತಿಗೆದಾರರಾದ ಸತೀಶ ಹೆಗಡೆ, ಶ್ರೀನಿವಾಸ ಪಟಗಾರ,ರೀಗನ್ ಡಿಸೋಜಾ,ವಿಶ್ವ ಕರುಮನೆ, ಬಾಲಚಂದ್ರ ಕುಂಬ್ರಿತೋಟ ,ಜಾಫರ್,ಸೈಯದ್ ಮಕ್ಬೂಲ್, ವಿನಾಯಕ ರೇವಣಕರ,ಮುಂತಾದವರು ಉಪಸ್ಥಿತರಿದ್ದರು.

error: