ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ: ವಿಕಾಸ ಅರ್ಬನ್ ಕೊ ಆಪರೇಟಿವ್ ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ 1.12 ಕೋಟಿ ರೂ ಲಾಭ ಗಳಿಸಿದೆ ಎಂದು ಬ್ಯಾಂಕ ಅಧ್ಯಕ್ಷ ಮುರಳಿ ಹೆಗಡೆ ಹೇಳಿದರು.
ಅವರು ಬ್ಯಾಂಕಿನ ಪ್ರಗತಿಯ ಕುರಿತು ಮಾಹಿತಿನೀಡಿ, ಪ್ರಸಕ್ತ ಸಾಲಿನಲ್ಲಿ ಕೆಡಿಸಿಸಿ ಬ್ಯಾಂಕ್ ನಿಂದ ಉತ್ತಮ ಅರ್ಬನ್ ಬ್ಯಾಂಕ್ ಎಂಬ ಪ್ರಶಸ್ತಿ ನೀಡಲಾಗುತ್ತಿದೆ. ಆರ್ಥಿಕ ಸಧೃಢತೆ ಹೊಂದಿದ ಮತ್ತು ಉತ್ತಮ ನಿರ್ವಹಣೆಯುಳ್ಳ ರಾಜ್ಯದಲ್ಲಿ ಕೆಲವೇ ಕೆಲವು ಬ್ಯಾಂಕ್ ಗಳಲ್ಲಿ ನಮ್ಮ ಬ್ಯಾಂಕ ಸಹ ಒಂದಾಗಿದೆ ಎಂದರು.
ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಸೆ.23 ರಂದು ಮಧ್ಯಾಹ್ನ 3 ಕ್ಕೆ ಪಟ್ಟಣದ ಅಡಕೆ ಭವನದಲ್ಲಿ ನಡೆಯಲಿದೆ ಎಂದರು.
ಉಪಾಧ್ಯಕ್ಷರಾದ ಅಪರ್ಣಾ ಘಟ್ಟಿ, ನಿರ್ದೇಶಕರಾದ ರಾಜೇಂದ್ರ ಬದ್ದಿ, ಅನಿತಾ ಹೆಗಡೆ, ನಾಗೇಶ ದೇವಳಿ, ಪ್ರಧಾನ ವ್ಯವಸ್ಥಾಪಕ ಉಮೇಶ ಭಾಗ್ವತ ಇದ್ದರು.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ