May 6, 2024

Bhavana Tv

Its Your Channel

ಕಳಚೆ ಗ್ರಾಮದಲ್ಲಿ ನಡೆದ ಜಿಲ್ಲಾ ಮಟ್ಟದ ಹವ್ಯಕ ಕ್ರಿಕೆಟ್ ಪಂದ್ಯಾವಳಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಹೊಸ ವರ್ಷದ ಆರಂಭದಲ್ಲಿ ಧಾತ್ರಿ ಪೌಂಡೇಶನ್ ಅಧ್ಯಕ್ಷರು, ಕಾಂಗ್ರೆಸ ಮುಖಂಡರು ಆದ ಶ್ರೀನಿವಾಸ್ ಭಟ್ ಇವರು ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲಿ ನಡೆದ ಜಿಲ್ಲಾ ಮಟ್ಟದ ಹವ್ಯಕ ಕ್ರಿಕೆಟ್ ಪಂದ್ಯಾವಳಿ ಕ್ರೀಡೋತ್ಸವದಲ್ಲಿ ಭಾಗವಹಿಸಿ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಇಂತಹ ಕ್ರೀಡೆಗಳು ಮೇಲಿಂದ ಮೇಲೆ ನಡೆಯಬೇಕು.ಕ್ರೀಡೆಯಿಂದ ಮಾನಸಿಕ ಒತ್ತಡ ನಿವಾರಣೆಯಾಗಿ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆಂದರು. ಕ್ರೀಡೋತ್ಸವಕ್ಕಾಗಿ ಶ್ರಮಿಸಿದ ಊರ ನಾಗರಿಕರಿಗೆ ಗೌರವ ಸಲ್ಲಿಸಲಾಯಿತು.
ಈ ಸಮಯದಲ್ಲಿ ಊರಿನ ಪ್ರಮುಖರಾದ ಉಮೇಶ ಭಾಗ್ವತ್, ಜಿ ಆರ್ ಹೆಗ್ಡೆ, ಅನಂತ್ ಹೆಗ್ಡೆ, ಗಣಪತಿ ಹೆಗ್ಡೆ, ಇನ್ನಿತರ ಹಿರಿಯರು ಹಾಗೂ ಕ್ರೀಡಾ ಪಟುಗಳು ಉಪಸ್ಥಿತರಿದ್ದರು.

error: