May 6, 2024

Bhavana Tv

Its Your Channel

ಯಲ್ಲಾಪುರ ಐದನೇಯ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರಿಗೆ ಆಮಂತ್ರಣ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಫೆಬ್ರುವರಿ 4 ರಂದು ಆನಗೋಡಿನಲ್ಲಿ ನಡೆಯಲಿರುವ ತಾಲೂಕಿನ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ನಾಟಕಕಾರ ಟಿ.ವಿ.ಕೋಮಾರ ಹಾಗೂ ಕೋಮಾರ ದಂಪತಿಯನ್ನು ಬಾಗಿನಕಟ್ಟಾದ ಅವರ ನಿವಾಸದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗೌರವಿಸಿ, ಸಮ್ಮೇಳನಕ್ಕೆ ಆಮಂತ್ರಿಸಲಾಯಿತು.
ಕೋಮಾರ ಅವರನ್ನು ಗೌರವಿಸಿ ಮಾತನಾಡಿದ ತಾಲೂಕು ಕ.ಸಾ.ಪ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, 4 ವರ್ಷಗಳ ನಂತರ ತಾಲೂಕಿನ ಸಮ್ಮೇಳನ ನಡೆಯುತ್ತಿದ್ದು, ಯಶಸ್ವಿಯಾಗಿ ನಡೆಸಲು ಎಲ್ಲರ ಸಹಕಾರ ಕೋರುತ್ತೇವೆ ಎಂದರು.
ಗೌರವ ಸ್ವೀಕರಿಸಿದ ಟಿ.ವಿ.ಕೋಮಾರ ಮಾತನಾಡಿ, ಸಾಹಿತ್ಯ ಸೇವೆಯನ್ನು ಪರಿಷತ್ತು ಗುರುತಿಸಿ, ಸರ್ವಾಧ್ಯಕ್ಷರನ್ನಾಗಿ ಮಾಡಿರುವುದು ಸಂತಸ ತಂದಿರುವ ಜೊತೆಗೆ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ತಾಲೂಕು ಕ.ಸಾ.ಪ ಗೌರವ ಕಾರ್ಯದರ್ಶಿ ಶ್ರೀಧರ ಅಣಲಗಾರ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಜಿ.ಎನ್.ಭಟ್ಟ ತಟ್ಟಿಗದ್ದೆ, ಕೃಷ್ಣ ಭಟ್ಟ ನಾಯಕನಕೆರೆ, ಕವಿ ಸುಬ್ರಾಯ ಬಿದ್ರೆಮನೆ, ಸ್ಥಳೀಯ ಪ್ರಮುಖರಾದ ಎನ್.ಆರ್.ಗಾಂವ್ಕಾರ, ದತ್ತಾತ್ರೇಯ ಭಟ್ಟ ತಾರಗಾರ, ಶ್ರೀಪತಿ ಹಂಗಾರಿ, ಜಯಾ ಭಟ್ಟ, ಶಿವರಾಮ ಗಾಂವ್ಕಾರ, ಗಣಪತಿ ಕಂಚಿಪಾಲ ಇತರರಿದ್ದರೆಂದು
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.

error: