May 6, 2024

Bhavana Tv

Its Your Channel

ಭೀಮ ಆಮಿ೯ ಏಕತಾ ಮಿಷನ್ ತಾಲೂಕಾ ಪದಾಧಿಕಾರಿಗಳ ನೇಮಕ.

ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಾ ಭೀಮ ಆಮಿ೯ ಏಕತಾ ಮಿಷನ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು. ಈ ಸಭೆಯ ಇಂಡಿ ತಾಲೂಕಾ ಅಧ್ಯಕ್ಷರನ್ನಾಗಿ ಉತ್ತಮ ಕಟ್ಟಿಮನಿ, ಉಪಾಧ್ಯಕ್ಷರನ್ನಾಗಿ ನಿತೀಶ್ ತಳಕೇರಿ, ಪ್ರಧಾನ ಕಾಯ೯ದಶಿ೯ಯಾಗಿ ಖಾದೀರ್ ಮೋಮೀನ್,ಸಂಘಟನಾ ಕಾಯ೯ದಶಿ೯ಯಾಗಿ ಅರುಣ ಪಾದಗಟ್ಟಿ,ಸಂಘಟನಾ ಸಂಚಾಲಕರಾಗಿ,ಆಕಾಶ ಜಾಧವ್, ಸಲಹೆಗಾರರಾಗಿ ಅರವಿಂದ ಗೂಗಿಹಾಳ, ಇವರನ್ನು ಆಯ್ಕೆ ಮಾಡಿ ಜಿಲ್ಲಾಧ್ಯಕ್ಷರಾದ ಮಲ್ಲು ಜಾಲವಾದಿ, ಆದೇಶ ಹೊರಡಿಸಿದ್ದಾರೆ.ತದನಂತರ ಜಿಲ್ಲಾ ಧ್ಯಕ್ಷರು ಮಾತನಾಡಿ ಭೀಮ ಆಮಿ೯ ಸಂಘಟನನಯು ರಾಜ್ಯಾಧ್ಯಕ್ಷ ರ ನೇತೃತ್ವದಲ್ಲಿ ಇಡೀ ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು, ಮತ್ತು ಗ್ರಾಮಗಳಲ್ಲಿ ನಮ್ಮ ಸಂಘಟನೆಯು ಕಾಯ೯ನಿವ೯ಹಿಸುತ್ತಿದೆ,ಅಷ್ಟೇ ಅಲ್ಲದೇ ಎಸ್ ಸಿ/ ಎಸ್‌ಟಿ, ಅಲ್ಪ ಸಂಖ್ಯಾತರಿಗೆ, ಹಾಗೂ ಹಿಂದುಳಿದ ವರ್ಗಗಳಲ್ಲಿ ಅನ್ಯಾಯ , ಅತ್ಯಾಚಾರ, ದಬ್ಬಾಳಿಕೆ ಆಗುತ್ತಿರುವುದನ್ನು ಪ್ರತಿಯೊಬ್ಬರ ಗಮನಕ್ಕೆ ತಂದು ಕಾನೂನು ನಿಯಮದಡಿ ನ್ಯಾಯ ದೊರಕಿಸಿಕೊಡುವುದು ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ರಾದ ಮತೀನ ದೇವದಾರ, ಜಿಲ್ಲಾಧ್ಯಕ್ಷರಾದ ಮಲ್ಲು ಜಾಲವಾದಿ,ನಾಗೇಶ್ ತಳಕೇರಿ,ಪರಶುರಾಮ ಶಿವಶರಣ,ಇತರರು ಉಪಸ್ಥಿತರಿದ್ದರು

ವರದಿ ಬಿ ಎಸ್ ಹೊಸೂರ.

error: