ವಿಜಯಪುರ – ರಾಜ್ಯ ಕರ್ನಾಟಕ ನವನಿರ್ಮಾಣ ವೇದಿಕೆಯಿಂದ ನಾಡಿನ ಹಿರಿಯ ನಟಿ ಅಭಿನಯ ಶಾರದೆ ನಟಿ ಜಯಂತಿ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಗಾಂಧಿ ವೃತ್ತದಲ್ಲಿ ಅರ್ಪಿಸಲಾಯಿತು,
ಕರ್ನಾಟಕ ನವನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷರಾದ ಶೇಷರಾವ ಮಾನೆ ಮಾತನಾಡಿ ಸುಶಿಕ್ಷಿತ
ಮನೆತನದಿಂದ ಬಂದ ಜಯಂತಿ ಅವರು ಮಲಯಾಳಿ, ತೆಲಗು, ಮರಾಠಿ,ಹಿಂದಿ, ತಮಿಳು ಮತ್ತು ಕನ್ನಡ ಮುಂತಾದ ಭಾಷೆಗಳಲ್ಲಿ ಅಭಿನಯಿಸಿ ೫೦೦ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿ ಜಯಂತಿ ಅವರ ಮೇಲೆ ಯಾವುದೇ ಘಾಸಿಫ್ ಇಲ್ಲದೆ ಗೌರವಾನ್ವಿತ ಪ್ರತಿಷ್ಠೆ ಹಿರಿಮೆ, ಸ್ವಾಭಿಮಾನ ಸಂಪನ್ನರಾಗಿ ಡಾ|| ರಾಜಕುಮಾರ ಜೊತೆ ೪೫ ಕ್ಕೂ ಹೆಚ್ಚು ಚಿತ್ರಗಳನ್ನು ಅಭಿನಯಿಸಿದ ಕೀರ್ತಿ ಅವರದು ಮಹಾನ ನಟಿಯನ್ನು ಕಳೆದುಕೊಂಡ ಚಿತ್ರರಂಗ ನಾಟಕರಂಗ, ಬಡವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಕೆ, ಬನ್ನಟ್ಟಿ, ಭೀಮಾಶಂಕರಯ್ಯ ವಿರಕ್ತಮಠ, ನ್ಯಾಯವಾದಿ ಎಂ.ಎA. ಖಿಲಾಸಿ, ಅಮೀನ ಕೊತವಾಲ,ದಸ್ತಗೀರ ಮನಗೊಳಿ, ಲಕ್ಷಣ ಮುಳವಾಡ, ನಂದಾ ಮಾಶಾಳ, ಶಾಂತಾಬಾಯಿ ದಿಕ್ಸಂಗಿ, ಚಂದ್ರಪ್ಪ ವಾಲಿಕಾರ, ಕಮಲಾಬಾಯಿ ಚೌಗಲೆ ಮುಂತಾದವರು ಉಪಸ್ಥಿತರಿದ್ದರು,
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ