ವರದಿ ಬಿ ಎಸ್ ಹೊಸೂರ.
ವಿಜಯಪೂರ ಜಿಲ್ಲೆಯ ಇಂಡಿ ತಾಲೂಕು ಸಮಗ್ರ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಆಗ್ರಹಿಸಿ ಜೆಡಿಎಸ್ ಪಕ್ಷದ ವತಿಯಿಂದ ತಾಲೂಕ ಅಧ್ಯಕ್ಷ ಬಿ ಡಿ ಪಾಟೀಲರ ನೇತ್ರತ್ವದಲ್ಲಿ ರಸ್ತಾ ರೊಕೊ ಚಳುವಳಿ ನಡೆಸಲಾಯಿತು.ಇನ್ನೂ ಇಂಡಿ ತಾಲೂಕೀನ ರೂಗಿ, ಹಂಜಗಿ, ತಡವಲಗಾ ಗ್ರಾಮದ ಸುಮಾರು ೫೦೦ ಕ್ಕಿಂತ ಹೆಚ್ಚು ರೈತರು ಹಾಗೂ ಯುವಕರು ಮಹಿಳೆಯರು ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಇದೇ ವೇಳೆಯಲ್ಲಿ ಸತ್ಯಾಗ್ರಹದ ಸ್ಥಳದಿಂದ ಪಾದಯಾತ್ರೆಯ ಮೂಲಕ ಬಸವೇಶ್ವರ ಸರ್ಕಲ್ಗೆ ಆಗಮಿಸಿ ಹೊರಾಟಗಾರರು ರಸ್ತೆ ಬಂದ ಮಾಡಿ ಟೈಯರ್ ಗಳಿಗೆ ಬೆಂಕಿ ಹಚ್ಚಿ ಆಕ್ರೊಶ ವ್ಯಕ್ತಪಡಿಸಿದರು.ನಂತರ ಹೊರಾಟವನ್ನು ಉದ್ದೇಶಿಸಿ ಬಿ ಡಿ ಪಾಟೀಲ ಮಾತನಾಡಿ ಇಂಡಿ ತಾಲೂಕ ಸಮಗ್ರ ನೀರಾವರಿ ಆಗಬೇಕು.ನಾವೂ ಧರಣಿ ಸತ್ಯಾಗ್ರಹ ಪ್ರಾರಂಭಿಸಿ ಏಳು ದಿನಗಳು ಅದರೂ ಕೂಡಾ ಇಲ್ಲಿ ತಾಲೂಕ ದಂಡಾಧಿಕಾರಿಗಳಾಲಿ ನೀರಾವರಿ ಅಧಿಕಾರಿಗಳಾಗಲಿ ಹಾಗೂ ನೀರಾವರಿ ಸಚಿವರಾಗಲಿ ಯಾರು ನಮಗೆ ಭೇಟಿಯಾಗಿಲ್ಲ ಎಂದು ಆಕ್ರೊಶವನ್ನು ವ್ಯಕ್ತಪಡಿಸಿದರು. ಶ್ರೀಶೈಲಗೌಡ ಪಾಟೀಲ, ಮರೆಪ್ಪ ಹಿರಣಿವಡ್ಡರ, ಮೈಹಿಬೂಬ ಬೇವನೂರ, ಮಾತನಾಡಿದರು.
ಈ ಸಂದರ್ಭದಲ್ಲಿ ಬಿ ಡಿ ಪಾಟೀಲ, ಸಿದ್ದು ಡಂಗಾ, ಮೈಹಿಬೂಬ ಬೇವನೂರ. ಶ್ರೀಶೈಲಗೌಡ ಪಾಟೀಲ, ಹಣಮಂತ ಹೊನ್ನಳ್ಳಿ, ನಾಗೇಶ ತಳಕೇರಿ, ಮರೆಪ್ಪ ಗಿರಣಿವಡ್ಡರ, ಪಿರಪ್ಪ ಹೊಟಗಾರ, ಡಾ ಪದ್ಮರಾಜ ಪೂಜಾರಿ, ಜೆಟ್ಟಪ್ಪ ಸುರಪೂರ, ರೇವಣ್ಣಯಳಮೇಲಿ, ವಿಜಯಕುಮಾರ ಲೊಕುರ, ಸಂತೋಷ ಹೊಸಮನಿ, ಮಹಿಬೂಬ ನದಾಪ್, ಮಾಳಪ್ಪ ಹಲಸಂಗಿ, ಜೆಟ್ಟಪ್ಪ ಲಾಳಸಂಗಿ, ಶ್ರೀಶೈಲ ಗುನ್ನಾಪೂರ.ವಿಠ್ಠಲ್ ಹಳ್ಳಿ, ಬಸವರಾಜ ಕವಡಿ, ಶ್ರೀಶೈಲ ಪಾಯಕರ, ಮನೊಜ ಬಿರಾದಾರ, ಶ್ರೀಮಂತ ಪೂಜಾರಿ, ಮಲ್ಲು ಬಂಥನಾಳ, ಧರ್ಮರಾಜ ಕಲ್ಲೂರ, ಸಿದ್ದವ್ವಗೌಡತಿ, ಪಾಟೀಲ, ಖಾತುನಬಿ, ದುಂಡವ್ವ ರೂಡಿ, ಸಿದ್ದವ್ವ ತಳವಾರ, ರಕಮಾ ಚಣೆಗಾಂವ.ಸೇರಿದAತೆ ಮುತಾಂದ ಕಾರ್ಯಕರ್ತರು ಉಪಸ್ಥಿತರಿದ್ದರು.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ