May 6, 2024

Bhavana Tv

Its Your Channel

ವಿಶ್ವ ಮಾನವ ರೂಪಿಸುವಲ್ಲಿ ೫ ಜನರ ಪಾತ್ರ ಬಹಳ ಮುಖ್ಯ: ಇಬ್ರಾಹಿಂ ಸುತಾರ.

ವಿಶ್ವ ಮಾನವ ರೂಪಿಸುವಲ್ಲಿ ೫ ಜನರ ಪಾತ್ರ ಬಹಳ ಮುಖ್ಯ ಎಂದು ಕನ್ನಡದ ಕಬೀರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ಹೇಳಿದರು.

ವಿಜಯಪೂರ ; ಜಿಲ್ಲೆಯ ಇಂಡಿ ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆಯ ಗುರು ಭವನದಲ್ಲಿ ಹಮ್ಮಿಕೊಂಡಿರುವ ಡಾ.ರಾಧಾಕೃಷ್ಣನ್ ರವರ ಜನ್ಮ ದಿನವೊತ್ಸವದ ನಿಮಿತ್ತ ಶಿಕ್ಷಕರ ದಿನಾಚರಣೆಯಲ್ಲಿ ವಿಶೇಷ ಆಹ್ವಾನಿತರಾಗಿ ಹೇಳಿದರು.
ಒಬ್ಬ ಮಗನನ್ನು ವಿಶ್ವ ಮಾನವ ಮಾಡಲಿಕ್ಕೆ ಹೊರಟರೆ ಪಾಲಕರು, ಶಿಕ್ಷಕರು, ಸಮಾಜದ ಮುಖಂಡರು,ಜನಪ್ರತಿ ನಿಧಿಗಳು ಅಷ್ಟೇ ಮುಖ್ಯ ಎಂದು ಹೇಳಿದರು. ಒಂದು ಕಡೆ ತಾಳ ತಪ್ಪಿದರೂ ಕಷ್ಟ ಆಗುತ್ತೆ ಎಂದು ಹೇಳಿದರು. ಉದ್ಘಾಟನೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ಶ್ರೀ ಅಭಿನವ ಪುಂಡಲಿAಗ ಮಹಾ ಶಿವಯೊಗಿಗಳು ಗೊರಸಾಳ ನೇರವೇರಿಸಿದರು, ತಾಲೂಕಾ ದಂಡಾಧಿಕಾರಿಗಳಾದ ಸಿ.ಎಸ್.ಕುಲಕರ್ಣಿ, ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ವಸಂತ ರಾಠೋಡ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಸಿ ಎಂ ಬಂಡಗಾರ ಹಾಗೂ ಶಿಕ್ಷಕ ಶಿಕ್ಷಕಿಯರ ಸಮೂಹವೇ ಭಾಗಿಯಾಗಿದ್ದರು.

ವರದಿ ಬಿ ಎಸ್ ಹೊಸೂರ.

error: