May 4, 2024

Bhavana Tv

Its Your Channel

ತಾಲೂಕಾ ಸಮಗ್ರ ನೀರಾವರಿ ಆಗ್ರಹಿಸಿ ಜೆಡಿಎಸ್ ದಿಂದ ಐದನೇ ದಿನದ ಧರಣಿ ಸತ್ಯಾಗ್ರಹ

ವರದಿ ಬಿ ಎಸ್ ಹೊಸೂರ.

ವಿಜಯಪೂರ: ಇಂಡಿ ತಾಲೂಕಾ ಸಮಗ್ರ ನೀರಾವರಿ ಆಗ್ರಹಿಸಿ ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ನೇತೃತ್ವದಲ್ಲಿ ಅನೇಕ ಕಾರ್ಯ ಕರ್ತರು ಪಟ್ಟಣದ ಮಿನಿ ವಿಧಾನ ಸೌದಧ ಎದುರು ನಡೆದ ಐದನೆ ದಿನದ ಧರಣಿ ಸತ್ಯಾಗ್ರಹದಲ್ಲಿ ಇಂದು ಜೇವೂರ, ಹೊರ್ತಿ, ಕೊಳುರಗಿ, ಇಂಗಳಗಿ, ಶಿರಕನಹಳ್ಳಿ, ಗ್ರಾಮದ ಪ್ರಮುಖರು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಇಂಡಿ ತಾಲೂಕಾ ಸಮಗ್ರ ನೀರಾವರಿ ಯೋಜನೆಗಳ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಲು ಆಗಮಿಸಿದರು, ಹೋರಾಟವನ್ನು ಉದ್ದೇಶಿಸಿ ರಾಷ್ರ‍್ಟೀಯ ಸಂಗೊಳ್ಳಿ ರಾಯಣ್ಣ ಸೇನೆ ಸಿಂದಗಿ ತಾಲೂಕ ಅಧ್ಯಕ್ಷ ಶರಣು ಪುರದಾಳ ಮಾತನಾಡಿ ಬಿ ಡಿ ಪಾಟೀಲರು ಹಮ್ಮಿಕೊಂಡಿದ್ದ ಈ ಹೊರಾಟ ಅರ್ಥಪೂರ್ಣವಾಗಿದೆ ಈ ಹೊರಾಟದಲ್ಲಿ ಪ್ರತಿಯೊಂದು ಗ್ರಾಮದಿಂದ ಹತ್ತಾರು ಜನರು ಬಂದು ಈ ಧರಣಿ ಸತ್ಯಾಗ್ರಹ ದಲ್ಲಿ ಪಾಲ್ಗೊಂಡು ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಡಲಸಂಗದ ಪ್ರಕಾಶಮಹಾರಾಜ, ಶರಣಗೌಡ ಪಾಟೀಲ, ವಿಠ್ಠಲ ಕಾಂಬಳೆ, ಬಸವರಾಜ ಬಿರಾದಾರ, ಮಹಮ್ಮದ, ಬಾಬುಲಾಲ್ ಕಾರಬಾರಿ,ಶರಣು ಪುರದಾಳ, ಕಾಂತು ಬಂಡಗಾರ, ಮಲಿಂಗ್ ಅಲಿ ಶೇಕ್,ಪರಮಾನಂದ ಪೂಜಾರಿ, ಸಂಗಮೇಶ ತೆನಹಳ್ಳಿ, ಮಲ್ಲಿಕಾರ್ಜುನ ಹಂಜಗಿ, ಭೀಮರಾಯ ಹಂಜಗಿ ಮುಂತಾದವರು ಉಪಸ್ಥಿತರಿದ್ದರು

error: