ಭಟ್ಕಳ:ಅಕ್ರಮವಾಗಿ ಇನೋವಾ ಕಾರಿನಲ್ಲಿ ಜಾನುವಾರು ಸಾಗಾಟ ಮಾಡುವ ವೇಳೆ ಮುರ್ಡೇಶ್ವರದ ಬಸ್ತಿಯಲ್ಲಿ ವಾಹನ ಸಮೇತ ಜಾನುವಾರನ್ನು ವಶಪಡಿಸಿಕೊಂಡಿದ್ದು ಆರೋಪಿ ಪರಾರಿಯಾದ ಘಟನೆ ಗುರುವಾರ ನಡೆದಿದೆ.
ಆರೋಪಿಗಳಾದ ಶಬ್ಬರ ಅಬ್ದುಲ್ ಶೇಖ್, ಬಸ್ಲಿಮಕ್ಕಿ, ಹಾಗೂ ಸಮೀರ್ ಶಂಸುದ್ದೀನ್ ಸಾಬ್ ಮುರ್ಡೇಶ್ವರ ಈ ಇಬ್ಬರು ಸೇರಿ ಇನೋವಾ ವಾಹನ ಸಂಖ್ಯೆ ಕೆ.ಎಲ್೧೪/ಪಿ ೭೯೬೪ ರಲ್ಲಿ ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಯಾವುದೇ ದಾಖಲೆ ಇಲ್ಲದೆ ೩ ಹೋರಿಗಳನ್ನು ಅಕ್ರಮವಾಗಿ ಸಾಗಾಟ ಮಾಡುವ ವೇಳೆ ಮುರುಡೇಶ್ವರ ಪೋಲಿಸ ಠಾಣೆಯ ವ್ಯಾಪ್ತಿಯ ಬಸ್ತಿಯ ಸಮೀಪ ಪೊಲೀಸರು ವಾಹನ ಅಡ್ಡಗಟ್ಟಿದ ವೇಳೆ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದು ವಾಹನ ಸಮೇತ ಜಾನುವಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮುರ್ಡೇಶ್ವರ ಠಾಣೆ ಪಿ.ಎಸೈ ರವೀಂದ್ರ ಬಿರಾದರ ದೂರು ನೀಡಿದ್ದು ಪ್ರಕರಣ ದಾಖಲಿಸಿ ಕೊಂಡ ಹವಾಲ್ದಾರ್ ಸುರೇಶ್ ದೇವಡಿಗ್ ತನಿಕೆ ಕೈಗೊಂಡಿದ್ದಾರೆ.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.