ಕುಮಟಾ: ಭಾನುವಾರ ಕುಮಟಾದ ಮಹಾತ್ಮ ಗಾಂಧಿ ಹೈಸ್ಕೂಲಿನಲ್ಲಿ ನಡೆದ ಕವಿ ವೆಂಕಟೇಶ ಬೈಲೂರು ಇವರ ಮಿಂಚು ಹನಿಗಳು (ಹನಿಗವನ ಸಂಕಲನ ) ಮತ್ತು ತಿಂಗಳ ಮಾಮ (ಮಕ್ಕಳ ಕವಿತೆಗಳ ಸಂಕಲನ) ಲೋಕಾರ್ಪಣೆ ಸಮಾರಂಭ. ಕುಮಟಾದ ಪ್ರಸಿದ್ಧ ದಂತ ವೈದ್ಯರಾದ ಡಾಕ್ಟರ್ ದೀಪಕ್ ನಾಯ್ಕರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಖ್ಯಾತ ಕಾದಂಬರಿ ಕಾರರು ಕಥೆಗಾರರು ಆದ ಡಾ|| ಶ್ರೀಧರ ಬಳಗಾರ ಅವರು ಮಿಂಚು ಹನಿಗಳು ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. ಮತ್ತೋರ್ವ ಖ್ಯಾತ ಮಕ್ಕಳ ಸಾಹಿತಿಗಳಾದ ತಮ್ಮಣ್ಣ ಬೀಗಾರ ಸಿದ್ದಾಪುರ ಇವರು ಮಕ್ಕಳ ಕವನಸಂಕಲನವನ್ನು ಬಿಡುಗಡೆಗೊಳಿಸಿದರು. ಭಟ್ಕಳದ ಸಾಹಿತಿಗಳೂ ಕವಿಗಳು ಅಂಕಣಕಾರರು ಶಿಕ್ಷಕರಾದ ಶ್ರೀಧರ್ ಶೇಟ್ ಶಿರಾಲಿ ರವರು ಮಿಂಚು ಹನಿಗಳು ಕೃತಿಯನ್ನು ಪರಿಚಯಿಸಿದರು. ತಿಂಗಳ ಮಾಮ ಕೃತಿಯನ್ನು ಮತ್ತೋರ್ವ ಸಾಹಿತಿ ಕವಿ ಅಂಕಣಕಾರರಾದ ಪಿ ಆರ್ ನಾಯ್ಕ ರವರು ಪರಿಚಯಿಸಿದರು. ಶಿಕ್ಷಕರಾದ ಶ್ರೀ ಮಂಜುನಾಥ ನಾಯ್ಕರವರು ನಿರೂಪಣೆ ಮಾಡಿ ದರು. ಕುಮಾರಿ ರಮ್ಯಾ ಶೆಟ್ಟಿ ಇವರು ಪ್ರಾರ್ಥನೆ ಮಾಡಿದರು. ಶ್ರೀ ಗೋಪಾಲಕೃಷ್ಣ ಹೆಬ್ಬಾರ್ ಅವರು ವಂದನಾರ್ಪಣೆಗೈದರು.
More Stories
ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರು ಮರಳಿ ಕಾಂಗ್ರೆಸ್ಗೆ ಸೇರ್ಪಡೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!