ಭಟ್ಕಳ: ಸರಕಾರಿ ಪ್ರೌಢ ಶಾಲೆ ಬೆಳಕೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹೊನ್ನಪ್ಪ ನಾಯ್ಕರವರು ಉದ್ಘಾಟಿಸಿ ಶುಭಕೋರಿದರು. ಅಧ್ಯಕ್ಷತೆಯನ್ನು ಮುಖ್ಯಾಧ್ಯಾಪಕರಾದ ಶಾಲಿನಿ ನಾಯಕರವರು ವಹಿಸಿ ಯೋಗದ ಮಹತ್ವವನ್ನು ಹೇಳಿದರು.ಕೇವಲ ಆಚರಣೆಗೆ ಸೀಮಿತವಾಗದೇ ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಸದಸ್ಯರಾದ ವಿನೋದ ನಾಯ್ಕ, ಹಾಗೂ ವೆಂಕಟೇಶ ನಾಯ್ಕ ವಹಿಸಿದರು.
ಪ್ರಕಾಶ ಶಿರಾಲಿ ಇವರು ವಿಶ್ವ ಯೋಗ ದಿನಾಚರಣೆಯ ಕುರಿತು ಪ್ರಾಸ್ತಾವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿದರು ಭಾರತಿ ಶಾನಭಾಗ ಕಾರ್ಯಕ್ರಮವನ್ನು ನಿರ್ವಹಿಸಿದರು ಸಿ ಎಸ್ ಬೈಲೂರು ವಂದನಾರ್ಪಣೆ ಮಾಡಿದರು. ನಂತರ ವಿದ್ಯಾರ್ಥಿಗಳು ಶಿಕ್ಷಕರು ಪ್ರಕಾಶ ಶಿರಾಲಿಯವರ ನೇತ್ರತ್ವದಲ್ಲಿ ಯೋಗಾಸನಗಳನ್ನು ಮಾಡಿದರು ಯೋಗ ಗೀತೆ ಪ್ರಾರ್ಥನೆ ಪ್ರಾಣಾಯಾಮ ವಿವಿಧ ಆಸನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಅಸಕ್ತಿಯಿಂದ ಭಾಗವಹಿಸಿದರು
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.