May 19, 2024

Bhavana Tv

Its Your Channel

ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ

ಕಾರ್ಕಳ: ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ಪರಂಪರೆಯಿAದಲೇ ನಡೆದುಕೊಂಡು ಬಂದ ಸಂಸ್ಥಾಪಕರ ದಿನಾಚರಣೆ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಗಳಿಸಿದ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವು ಸಂಸ್ಥೆಯ ಶ್ರೀ ವರದೇಂದ್ರ ಸದನದಲ್ಲಿ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಸ್.. ನಿತ್ಯಾನಂದ ಪೈ ವಹಿಸಿ ವಿದ್ಯಾರ್ಥಿಗಳು ನಿರಂತರ ಸಾಧನೆಯಲ್ಲಿ ತಿರುಕನು ಕಂಡ ಕನಸುಗಳಂತಾಗದೇ ಕಂಡAತಹ ಕನಸಾಗಬೇಕೆಂದು ತಿಳಿಸುತ್ತಾ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ಕೆ. ನರೇಂದ್ರ ಕಾಮತ್, ಆಡಳಿತ ಮಂಡಳಿಯ ಸದಸ್ಯರಾದ ಜ್ಯೋತಿ ಜೆ ಪೈ. ಶ್ರೀ ವೈ ಮೋಹನ್ ಶೆಣೈ, ಸಂಸ್ಕೃತ ಭಾಷಾ ಪೋಷಕರೂ, ದಾನಿಗಳಾದ ನಿರ್ಮಲಾ ಕಾಮತ್, ರಾಧಾ ಬಾಯಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶ್ರೀಮ ವಿದ್ಯಾ ಕಿಣಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯ ಪೂರ್ವಾಧ್ಯಕ್ಷರಾಗಿದ್ದ ದಿ| ಕೆ. ಶಾಂತಾರಾಮ ಕಾಮತ್‌ರವರ ಸವಿನೆನಪಿನಲ್ಲಿ ಅವರ ಸುಪುತ್ರರಾದ ಕೆ. ನಾಗೇಂದ್ರ ಕಾಮತ್ ಪ್ರಾಯೋಜಿಸಿದ ವಿದ್ಯಾರ್ಥಿ ವೇತನವನ್ನು, ಶಾಲಾ ದತ್ತನಿಧಿ ವಿದ್ಯಾರ್ಥಿವೇತನವನ್ನು ಹಾಗೂ ಹಾಗೂ ಅತಿಥಿಗಳಾದ ನಿರ್ಮಲಾ ಕಾಮತ್, ರಾಧಾ ಬಾಯಿರವರು ಪ್ರಾಯೋಜಿಸಿದ ಸಂಸ್ಕೃತ ಭಾಷಾ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ವೃಂದಾ ಶೆಣೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಕ್ಷಕ ಆರ್. ನಾರಾಯಣ ಶೆಣೈ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು ಶಿಕ್ಷಕ ಗಣೇಶ ಜಾಲ್ಸೂರ್ ನಿರೂಪಿಸಿ ಶಿಕ್ಷಕ ವೀಣಾ ವಂದಿಸಿದರು.

error: