ಗುಂಡ್ಲುಪೇಟೆ ಪಟ್ಟಣದ ಶ್ವೇತಾದ್ರಿ ಗಿರಿಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ.ಗಿರೀಶ್ ಮತ್ತು ನಾಯಕ ಸಮಾಜದ ಮುಖಂಡರು ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿದರು. ನಂತರ ಮಾತನಾಡಿದ ಪಿ. ಗಿರೀಶ್ ಸಮಾಜ ಅಂದರೆ ನಾವೆಲ್ಲ ಒಂದೇ, ರಾಜಕೀಯ ಬೇರೆ ಮಾಡೋಣ ಆದರೆ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಸಮಾಜಕ್ಕೆ ಸಮಾಜದ ಏಳಿಗೆಗೆ ನಾವೆಲ್ಲ ಸಂಘಟನೆಕಾರರಾಗಿ ಸೇವೆ ಸಲ್ಲಿಸೋಣ ಅಲ್ಲದೆ ಸಮಾಜದ ವಿಷಯ ಬಂದಾಗ ರಾಜಕೀಯ ಬೇಡ ಒಗ್ಗಟ್ಟಿನಿಂದ ನಾವೆಲ್ಲ ಒಟ್ಟಾಗಿ ಸೇರೋಣ ಎಂದರು.
ಈ ಸಂದರ್ಭದಲ್ಲಿ ಎನ್ ಮಲ್ಲೇಶ್, ನಾಯಕ ಸಮಾಜದ ಮುಖಂಡರುಗಳು ಹಾಗೂ ಪುರಸಭಸದಸ್ಯರಾದ ರಂಗಸ್ವಾಮಿ, ನಾ ಕುಮಾರ್, ಕೃಷ್ಣ ನಾಯ್ಕ, ವೆಂಕಟೇಶ್ ನಾಯಕ್, ಮಣಿಕಂಠ ನಾಯಕ, ಪತ್ರಿಕಾ ವರದಿಗಾರರಾದ ವೇಣು ನಾಯಕ, ಸಮಾಜದ ಯುವಕರು ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ವರದಿ: ಸದಾನಂದ ಕನ್ನೇಗಾಲ
More Stories
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.
16ನೇ ತಾರೀಕು ನೀರಿಗಾಗಿ ಚಳುವಳಿ
ಚಾಮರಾಜನಗರ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ರವರಿಂದ ನಾಮಪತ್ರ ಸಲ್ಲಿಕೆ