ಭಟ್ಕಳ: ನಮ್ಮ ಮೇಲೆ ನಾವು ವಿಶ್ವಾಸವಿಟ್ಟು ಸಾಧಿಸಲು ಹೊರಟರೆ ಅದ್ಭುತವಾದದ್ದನ್ನು ಪಡೆಯಲು ಸಾಧ್ಯ ಎಂದು ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಸವಿತಾಕಾಮತ ಹೇಳಿದರು.
ಅವರು ದಿ ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನಲ್ಲಿ ಆಯೋಜಿಸಿದ್ದ “ಸಾಧನಾ 2023” ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಮೇಲೆ ನಂಬಿಕೆಯನ್ನಿಟ್ಟುಕೊAಡು ಪ್ರಯತ್ನಶೀಲರಾದರೆ ಏನನ್ನೂ ಸಾಧಿಸಬಹುದು, ಜೊತೆಗೆ ದೃತಿಗೆಡದೆ ಕ್ಷÄಲ್ಲಕ ಕಾರಣಕ್ಕೆ ಆತ್ಮಹತ್ಯೆ ಯಂತಹ ನಿರ್ಧಾರವನ್ನು ತೆಗೆದುಕೊಳ್ಳಬಾರದೆಂದು ಹೇಳಿದರು.ಭಟ್ಕಳ ಎಜ್ಯುಕೇಶನ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ್ ನಾಯಕಅದ್ಯಕ್ಷತೆ ವಹಿಸಿದ್ದರು.ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಬಾಗ ವರದಿ ವಾಚಿಸಿದರು. ವಿದ್ಯಾರ್ಥಿಗಳಾದಕಾರ್ತಿಕ ಶ್ಯಾನಭಾಗ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಸಂದೇಶಆಚಾರ್ಯ ಸ್ವಾಗತಿಸಿದರು ಅರ್ಜುನ ವಂದಿಸಿದರು, ದಿಶಾ ಮತ್ತು ಶ್ರೀಭಾಗ್ಯಾ ನಿರೂಪಿಸಿದರು. ಕಾರ್ಯಕ್ರಮದಲ್ಲಿಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾದನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಭಾಗಾವಾರು ಅತ್ಯುತ್ತಮ ವಿದ್ಯಾರ್ಥಿಗಳಾಗಿ ಕಲಾ ವಿಬಾಗದಲ್ಲಿ ಆರತಿ ನಾಯ್ಕ, ವಾಣಿಜ್ಯದಗಣಕ ಶಾಸ್ತç ವಿಭಾಗದಲ್ಲಿ ಧೀರÀಜ ಶೆಟ್ಟಿ, ವಾಣಿಜ್ಯದ ಸಂಖ್ಯಾ ಶಾಸ್ತçದ ವಿಭಾಗದಲ್ಲಿ ಜೀವೋತ್ತಮ ಮತ್ತುಧನುಷ ಶೆಟ್ಟಿ, ವಿಜ್ಞಾನ ವಿಭಾಗದಲ್ಲಿ ತಿಲಕ ಮೊಗೇರ ಮತ್ತು ಮನೀಷಾ ಮೊಗೇರ ಹಾಗೂ ಕಾಲೇಜಿನಅತ್ಯುತ್ತಮ ವಿಧ್ಯಾರ್ಥಿಯಾಗಿ ವರಮಹಾಲಕ್ಷಿö್ಮÃ ಪ್ರಶಸ್ತಿಯನ್ನು ಪಡೆದುಕೊಂಡರು.ಕೊನೆಯಲ್ಲಿ ಪ್ರಥಮ ಪಿ.ಯು.ಸಿ.ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ