ಮುರ್ಡೇಶ್ವರ : ನೇತ್ರಾಣಿ ಅಡ್ವೆಂಚರ್ ಮಾಲಕರಾದ ಗಣೇಶ ಹರಿಕಾಂತ ಈ ಹೊಸ ಸಾಧನಗಳನ್ನು ಪರಿಚಯಿಸಿದ್ದು, ಉಜಿರೆಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಮತ್ತು ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್ ರಿಬ್ಬನ ಕತ್ತರಿಸುವ ಮೂಲಕ ಪ್ಲೋಟಿಂಗ್ ಬ್ರಿಜ್ ನ್ನು ಉದ್ಘಾಟಿಸಿದರು.
ಈ ತೆಲುವ ಸೇತುವೆ 100 ಮೀಟರ್ ಉದ್ದವನ್ನು ಹೊಂದಿದ್ದು ಅಲೆಗಳ ಏರಿಳಿತಕ್ಕೆ ಹೊಯ್ದಾಡುವ ಈ ಬ್ರಿಜ್ ಪ್ರವಾಸಿಗರಿಗೆ ಅನನ್ಯ ಅನುಭವವ ನೀಡುವುದರಲ್ಲಿ ಎರಡು ಮಾತಿಲ್ಲ.
ನಂತರ ಪ್ಯಾರಾ ಸೆಲ್ಲಿಂಗ್ ಬೋಟ್ ನಲ್ಲಿ ನೇತ್ರಾಣಿಯವರೆಗೂ ಪ್ರಯಾಣ ಮಾಡುವುದರ ಮೂಲಕ ಪ್ಯಾರಾ ಸೆಲ್ಲಿಂಗ್ ಬೋಟ್ ಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುರುರ್ಡೇಶ್ವರದ ನೇತ್ರಾಣಿ ಅಡ್ವೆಂಚರ್ಸ ಕಛೇರಿಯಲ್ಲಿ ಗಣೇಶ ಹರಿಕಾಂತ ದಂಪತಿಗಳು ಉದ್ಘಾಟನೆಗೆ ಆಗಮಿಸಿದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿಗಳ ಪಾದ ಪೂಜೆಯನ್ನು ನೆರವೇರಿಸಿದರು. ನಂತರ ಭಕ್ತರನ್ನುದ್ದೇಶಿಸಿ ಸ್ವಾಮಿಜಿಗಳು ಆರ್ಶಿರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಸುಬ್ರಾಯ ನಾಯ್ಕ, ಕೃಷ್ಣ ನಾಯ್ಕ, ಈಶ್ವರ್ ನಾಯ್ಕ, ಮತ್ತಿತರ ಗಣ್ಯಮಾನ್ಯರು ಭಾಗಿಯಾಗಿದ್ದರು.
ಭಾವನಾ ಟಿವಿಗಾಗಿ ಈಶ್ವರ ನಾಯ್ಕ ಭಟ್ಕಳ
More Stories
ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಒಲಿಂಪಿಯಾಡ ಪದಕ ವಿತರಣ ಸಮಾರಂಭ:
ಮುರ್ಡೇಶ್ವರದಲ್ಲಿ ಗ್ರಾಮೀಣ ಮಹಿಳಾ ದಿನಾಚರಣೆ- 2024
ಅತ್ಯಂತ ಯಶಸ್ವೀಯಾಗಿ ನಡೆದ ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ಸಿಪ್ ಕಾರ್ಯಕ್ರಮ: