ಹೊನ್ನಾವರ ; ಹಿರಿಯ ವರದಿಗಾರರಾದ ವೆಂಕಟೇಶ್ ಮೇಸ್ತ ಪ್ರಭಾತ್ ನಗರದ ತಮ್ಮ ಬಾಡಿಗೆ ಮನೆಯಲ್ಲಿ
ದುರ್ಬಲ ಮನಸ್ಸಿನಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಾಧ್ಯಮ ಲೋಕದ ಅತ್ಯಂತ ಕ್ರಿಯಾಶೀಲ ಪತ್ರಕರ್ತರು, ನಮ್ಮ ವಾಹಿನಿಯ ವರದಿಗಾರರಾಗಿ ಕೆಲಸ ನಿರ್ವಹಿಸಿದ ವೆಂಕಟೇಶ್ ಮೇಸ್ತ ಇಂದು(ಬುಧವಾರ) ಬೆಳಗಿನ ಜಾವ ನಮ್ಮನ್ನೇಲ್ಲ ಬಿಟ್ಟು ಬಾರದ ಲೋಕಕ್ಕೆ ತೆರಳಿದರು.
ಇವರು ಸರಳ ಸಜ್ಜನರಾಗಿದ್ದಾರಲ್ಲದೆ ತುಂಬಾ ಸ್ವಾಭಿಮಾನಿಗಳಾಗಿದ್ದರು, ತಮ್ಮ ಕಷ್ಟ ಸುಖಗಳನ್ನು ಯಾರೊಂದಿಗೂ ಹೇಳಿಕೊಳ್ಳದ ಇವರು ಸ್ವಾವಲಂಬಿಗಳಾಗಿದ್ದರು, ಯಾವೊಂದು ದುಶ್ಚಟವಿಲ್ಲದ ಇವರು ಪ್ರಾಮಾಣಿಕವಾದ ಸರಳ ಜೀವನ ನಡೆಸುತ್ತಿದ್ದರು. ಇವರು ಹೊನ್ನಾವರದಲ್ಲಿ ಜನಾಂತರAಗ, ಭಾವನಾ ಟಿವಿ, ಸಯುಕ್ತ ಕರ್ನಾಟಕ, ನೂತನ, ಕೊಂಕಣ ಪ್ರಭ ಮೊದಲಾದ ಪತ್ರಿಕೆ ಹಾಗೂ ದ್ರಶ್ಯ ಮಾಧ್ಯಮದಲ್ಲಿ ವಸ್ತುನಿಷ್ಠ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದರು,
ಮುಖ್ಯವಾಗಿ ನಮ್ಮ ಭಾವನ ವಾಹಿನಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಉತ್ತಮ ವೇದಿಕೆಯನ್ನು ಒದಗಿಸಿದನ್ನು ಇಲ್ಲಿ ಸ್ಮರಿಸಬಹುದು. ನಮ್ಮ ಭಾವನ ವಾಹಿನಿಯಲ್ಲಿ ವರದಿಗಾರರಾಗಿ ನಿರೂಪಕರಾಗಿ ಕಾರ್ಯಕ್ರಮ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದನ್ನು ಭಾವನವಾಹಿನಿ ಯಾವಾಗಲೂ ಸ್ಮರಿಸುತ್ತದೆ.
ಇತ್ತೀಚಿಗೆ ಇವರು ನಮ್ಮ ವಾಹಿನಿಯನ್ನು ಬಿಟ್ಟು ತಮ್ಮ ಸ್ವಂತದಾದ ಕೊಂಕಣ ಪ್ರಭ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿದುಬಂದಿದೆ. ಅವರ ಪತ್ನಿ ಸುಶೀಲ ಮೇಸ್ತ ಮತ್ತು ಮಗಳು ದಿಯ ರವರಿಗೆ ದೇವರು ದುಃಖವನ್ನು ಸಹಿಸುವ ಶಕ್ತಿ ನೀಡಲಿ, ಬಾರದ ಲೋಕಕ್ಕೆ ಪಯಣ ಬೆಳೆಸಿದ ವೆಂಕಟೇಶ ಮೇಸ್ತ ಅವರ ಆತ್ಮಕ್ಕೆ ದೇವರು ಸದ್ಗತಿಯನ್ನು ನೀಡಲಿ ಎಂದು ಭಾವನ ವಾಹಿನಿಯು ಪ್ರಾರ್ಥಿಸುತ್ತದೆ.
More Stories
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು