April 29, 2024

Bhavana Tv

Its Your Channel

ಪತ್ರಕರ್ತರ ಸಂಘದಿ0ದ ಪತ್ರಕರ್ತ ವೆಂಕಟೇಶ ಮೇಸ್ತರವರಿಗೆ ಶೃದಾಂಜಲಿ

ಹೊನ್ನಾವರ : ಪಟ್ಟಣದ ಪ್ರಭಾತನಗರದಲ್ಲಿ ಪತ್ರಕರ್ತ ವೆಂಕಟೇಶ ಮೇಸ್ತ ನಿಧನ ಹಿನ್ನಲೆ ಹೊನ್ನಾವರ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದಿ0ದ ಶೃದಾಂಜಲಿ ಸಲ್ಲಿಸುವ ಮೂಲಕ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.

ವೆಂಕಟೇಶ ಮೇಸ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆಯ ನಂತರ ಸಂಘದ ತಾಲೂಕ ಅಧ್ಯಕ್ಷ ಸತೀಶ ತಾಂಡೇಲ ಮಾತನಾಡಿ ಸ್ನೇಹಜೀವಿಯಾಗಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದ ವರದಿಗಾರಿಕೆಯ ಮೂಲಕ ಹಲವು ಸಮಸ್ಯೆಗಳಿಗೆ ಧ್ವನಿಯಾಗಿದ್ದರು. ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸಿದರು.
ನಾಗರಿಕ ಪತ್ರಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ಬದುಕಿ ಬಾಳಬೇಕಾದ ವಯಸ್ಸಿನಲ್ಲಿ ತಾವಾಗಿಯೇ ತಮ್ಮ ಬದುಕಿಗೆ ಕುತ್ತು ತಂದುಕೊ0ಡಿರುವುದು ಬೇಸರ ಮೂಡುತ್ತಿದೆ. ನಮ್ಮ ಮಾನ ಹಾಗೂ ಲೋಕದ ಮಾನವನ್ನು ಕಾಯ್ದುಕೊಳ್ಳುವ ಕಲೆಯನ್ನು ಪತ್ರಕರ್ತರು ರೂಡಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೆ ದುಃಖ ನಮಗಷ್ಟೆ ಅಲ್ಲದೇ ಲೋಕಕ್ಕೂ ಆಗಲಿದೆ. ವಿವಿಧ ರಂಗದ ಮೂಲಕ ಸಾಮಾಜಿಕ ಕಳಕಳಿಯ ಗುಣ ಅಳವಡಿಸಿಕೊಂಡ ಅವರ ಸ್ಮರಣೆ ಸದಾ ಕಾಲ ಇರಲಿದೆ ಎಂದರು.
ಪತ್ರಕರ್ತರು ನ್ಯಾಯವಾಧಿಯಾದ ಎಂ.ಎನ್.ಸುಬ್ರಹ್ಮಣ್ಯ ಮಾತನಾಡಿ ಅನಿಶ್ಚಿತವಾದ ಪತ್ರಿಕೆಯಲ್ಲಿ ನೆಲೆ ಸಿಗದ ನಾವೆಯಂತೆ ಅವರು ತೇಲಿ ಹೋಗಿರುವುದು ಬೇಸರವಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘದ ತಾಲೂಕ ಪ್ರತಿನಿಧಿ ಎಚ್.ಎಂ.ಮಾರುತಿ, ಪತ್ರಕರ್ತರಾದ ಮುರುಳಿಧರ ಗಾಯತೊಂಡೆ, ಸುಧೀರ ಕಡ್ನಿರ್, ನಾಗರಾಜ ನಾಯ್ಕ , ಶಿವಾನಂದ ಮೇಸ್ತ, ವಿಶ್ವನಾಥ ಸಾಲ್ಕೋಡ್ ಉಪಸ್ಥಿತರಿದ್ದರು.
ವರದಿ ; ವಿಶ್ವನಾಥ ಸಾಲ್ಕೋಡ್, ಹೊನ್ನಾವರ

error: