ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ- ಧಾರವಾಡ
ತುಮಕೂರು ; ದಿನಾಂಕ 30:04:2021 ಸಮಯ ಸಂಜೆ 4 ರಿಂದ 5 ರವರೆಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ಮಧುಗಿರಿ ಜಿಲ್ಲಾ ಘಟಕ (ತುಮಕೂರು ಉತ್ತರ) ಹಾಗೂ ಸಾವಿತ್ರಿಬಾಯಿ ಫುಲೆ ವಿಚಾರ ವೇದಿಕೆ, ಸಿರಾ ತಾಲ್ಲೂಕು ಇವುಗಳ ಸಹಯೋಗದಲ್ಲಿ ನಡೆದ ಗೂಗಲ್ ಮೀಟ್ ಚಿಂತನ ಕಾರ್ಯಕ್ರಮದಲ್ಲಿ,”ದೇಶದ ಮಹಿಳಾ ಚಳುವಳಿ” ಎಂಬ ವಿಷಯ ಕುರಿತಂತೆ ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಚಿಂತಕರು,ಬರಹಗಾರರು,ಶ್ರೀ ಮಂಗ್ಳೂರು ವಿಜಯ್ ರವರು ಭಾಗವಹಿಸಿ ಮಂಡಿಸಿದರು. ಸುಮಾರು 40 ಕ್ಕೂ ಹೆಚ್ಚು ಮಂದಿ ಚಿಂತನೆಯಲ್ಲಿ ಬಾಗವಹಿಸಿ ಸಂವಾದ ನಡೆಸಿ, ಮೊದಲ ಪ್ರಯತ್ನದ ಈ ಗೂಗಲ್ ಮೀಟ್ ಕಾರ್ಯಕ್ರಮದ
ಯಶಸ್ವಿಗೆ ಕಾರಣರಾದರು.
ಆಯೋಜನೆ ಮಾಡಿದ್ದ ಮಧುಗಿರಿ ಸಂಘ ಹಾಗೂ ಜಿಲ್ಲಾ ಪದಾಧಿಕಾರಿಗಳಾದ ಶ್ರೀಮತಿ ಶೈಲಜ,ಚಂದ್ರಕಲಾ ಮೊದಲಾದವರಿಗೆ , ಸಂಪನ್ಮೂಲ ವ್ಯಕ್ತಿಗಳಿಗೆ,ಹಾಗೂ ಭಾಗವಹಿಸಿದ ಎಲ್ಲರಿಗೂ ರಾಜ್ಯ ಸಂಘದ ವತಿಯಿಂದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ*. ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಜ್ಯೋತಿ.ಹೆಚ್.ರವರು ಧನ್ಯವಾದ ಸಲ್ಲಿಸಿದ್ದಾರೆ..
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ