April 24, 2024

Bhavana Tv

Its Your Channel

ಮೊದಲ‌ ಪ್ರಯತ್ನ ದಲ್ಲಿಯೇ ಗೂಗಲ್ ಮೀಟ್ ಬಳಸಿ, ಆಯೋಸಿದ್ದ ಚಿಂತನ ಮಂಥನ ಕಾರ್ಯಕ್ರಮ ಯಶಸ್ವಿ….

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ- ಧಾರವಾಡ

ತುಮಕೂರು ; ದಿನಾಂಕ 30:04:2021 ಸಮಯ ಸಂಜೆ 4 ರಿಂದ 5 ರವರೆಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ಮಧುಗಿರಿ ಜಿಲ್ಲಾ ಘಟಕ (ತುಮಕೂರು ಉತ್ತರ) ಹಾಗೂ ಸಾವಿತ್ರಿಬಾಯಿ ಫುಲೆ ವಿಚಾರ ವೇದಿಕೆ, ಸಿರಾ ತಾಲ್ಲೂಕು ಇವುಗಳ ಸಹಯೋಗದಲ್ಲಿ ನಡೆದ ಗೂಗಲ್ ಮೀಟ್ ಚಿಂತನ ಕಾರ್ಯಕ್ರಮದಲ್ಲಿ,”ದೇಶದ ಮಹಿಳಾ ಚಳುವಳಿ” ಎಂಬ ವಿಷಯ ಕುರಿತಂತೆ ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಚಿಂತಕರು,ಬರಹಗಾರರು,ಶ್ರೀ ಮಂಗ್ಳೂರು ವಿಜಯ್ ರವರು ಭಾಗವಹಿಸಿ ಮಂಡಿಸಿದರು. ಸುಮಾರು 40 ಕ್ಕೂ ಹೆಚ್ಚು ಮಂದಿ ಚಿಂತನೆಯಲ್ಲಿ ಬಾಗವಹಿಸಿ ಸಂವಾದ ನಡೆಸಿ, ಮೊದಲ ಪ್ರಯತ್ನದ ಈ ಗೂಗಲ್ ಮೀಟ್ ಕಾರ್ಯಕ್ರಮದ
ಯಶಸ್ವಿಗೆ ಕಾರಣರಾದರು.

ಆಯೋಜನೆ ಮಾಡಿದ್ದ ಮಧುಗಿರಿ ಸಂಘ ಹಾಗೂ ಜಿಲ್ಲಾ ಪದಾಧಿಕಾರಿಗಳಾದ ಶ್ರೀಮತಿ ಶೈಲಜ,ಚಂದ್ರಕಲಾ‌ ಮೊದಲಾದವರಿಗೆ , ಸಂಪನ್ಮೂಲ ವ್ಯಕ್ತಿಗಳಿಗೆ,ಹಾಗೂ ಭಾಗವಹಿಸಿದ ಎಲ್ಲರಿಗೂ ರಾಜ್ಯ ಸಂಘದ ವತಿಯಿಂದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ*. ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಜ್ಯೋತಿ.ಹೆಚ್.ರವರು ಧನ್ಯವಾದ ಸಲ್ಲಿಸಿದ್ದಾರೆ..

error: