ಬೆಳಗಾವಿ ; ಮುಸಗುಪ್ಪಿ ಗ್ರಾಮದ ಹನುಮಂತದೇವರ ಗುಡಿ ಮುಂದೆ ಹಾಲು ಓಕಳಿ ಆಡಲು ಹೊಂಡ ತೆಗೆಯ ಲಾಗಿದೆ .ಆ ಹೊಂಡದಲ್ಲಿ ನೀರು ತುಂಬಿಸಿ ಸಗಣಿ ಕೆಸರು ಬೆರೆಸಿ , ಡೊಂಬರ ಜಾತಿಯ ಹೆಣ್ಣುಮಗಳನ್ನು ನಿಲ್ಲಿಸಿ ,ಊರಿನ ಮೇಲ್ವರ್ಗದ ಗಂಡಸರೆಲ್ಲಾ ಸೇರಿ ಸಗಣಿ, ಕೆಸರು ,ರಾಡಿ ,ಬಣ್ಣ, ಇತರೆ ಎಲ್ಲವನ್ನು ಎರಚಲಾಗುತ್ತದೆ. ಈ ಅಮಾನವೀಯ ಅನಿಷ್ಟ ಪದ್ಧತಿಯನ್ನು ಹಾಲು ಓಕಳಿ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ .
ಈ ಆಚರಣೆ ರವಿವಾರ ಸಂಜೆ ನಾಲ್ಕು ಗಂಟೆಗೆ ಚಿತ್ರೀಕರಿಸಿದ್ದು .ಹಾಗೂ ಸೋಮವಾರ ಸಂಜೆ ನಾಲ್ಕು ಗಂಟೆಗೆ ಇದೇ ಕಾರ್ಯಕ್ರಮ ಸುಮಾರು ಐದು ನೂರು ಜನ ಊರಿನ ಪ್ರಮುಖರೆಲ್ಲ ಸೇರಿ ಎರಡನೇ ದಿನವೂ ಆಚರಿಸಲಾಗಿದೆ . ಆ ಹೆಣ್ಣು ಮಗಳಿಗೆ ಪುಡಿಗಾಸಿನ ಆಸೆ ತೋರಿಸಲಾಗುತ್ತದೆ. ೫೦೦೦ ರೂಪಾಯಿಗಳ . ಹಣದಾಸೆ ತೋರಿಸಿ ಇಂತಹ ಅಮಾನವೀಯ ಆಚರಣೆಯನ್ನ ಆಚರಿಸಲಾಗುತ್ತದೆ .ಈ ಆಧುನಿಕ ಕಾಲದಲ್ಲೂ ಜನಾಂಗೀಯ ನಿಂದನೆ ಆಗುವಂತಹ,ಅಸ್ಪೃಶ್ಯತೆಯ ಪ್ರತಿರೂಪದಂತಿರುವ ಅಮಾನವೀಯ, ಅನಿಷ್ಠ -ಆಚರಣೆ ಆಚರಿಸುವುದು ಅಪರಾಧವಾಗಿದ್ದು ದಯವಿಟ್ಟು ಈ ಆಚರಣೆಯನ್ನು ತಡೆಯಬೇಕಾಗಿ ಡೊಂಬರ ಸಂಘ ಪ್ರಮುಖರು ವಿನಂತಿಸಿಕೊAಡಿದ್ದಾರೆ. ಈ ಕರೋನಾ ಸಂಕಷ್ಟದ ಸಮಯದಲ್ಲಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಲ್ಲಿಸಿರುವಾಗ ಹಾಗೂ ನಿರ್ಬಂಧಿಸಿರುವ ಇಂತಹ ಸಂದರ್ಭದಲ್ಲಿ ಈ ಆಚರಣೆ ಆಚರಿಸುವುದು ಅಪರಾಧವಾಗಿದೆ. ಆದ್ದರಿಂದ ದಯವಿಟ್ಟು ಈ ಆಚರಣೆಗಳನ್ನು ತಡೆಯಬೇಕಾಗಿ ಸಂಬAಧಪಟ್ಟ ಪೋಲಿಸ್ ಇಲಾಖೆಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳನ್ನು , ತಹಸಿಲ್ದಾರ್ ಅವರನ್ನು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಅಲ್ಲದೆ ದೃಶ್ಯ ಮಾಧ್ಯಮ ಹಾಗೂ ಅಕ್ಷರ ಮಾಧ್ಯಮದ ಮಿತ್ರರು ಇಂತಹ ಅನಿಷ್ಠ ಪದ್ಧತಿಗಳ ತೊಡೆದುಹಾಕುವದಕ್ಕಾಗಿ ಕೈಜೋಡಿಸಬೇಕಾಗಿ ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇವೆ ಎಂದು ನೊಂದ ಸಮುದಾಯದ ಪರವಾಗಿ ಡಿ .ಕುಮಾರಸ್ವಾಮಿ. ಮರ್ಲಾನಹಳ್ಳಿ. ಕಾರಟಗಿ ವಿನಂತಿಸಿದ್ದಾರೆ,.
ವರದಿ ; ಮಹೇಶ ಶರ್ಮಾ, ಬೆಳಗಾವಿ
More Stories
ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ
ಬುಡಕಟ್ಟು ಸಿದ್ಧಿ ಸಮುದಾಯದವರ ವಿವಿಧ ಬೇಡಿಕೆಗಳ ಕುರಿತು ಸುವರ್ಣಸೌಧದಲ್ಲಿ ಸಚಿವ ಶಿವರಾಮ ಹೆಬ್ಬಾರ ರವರು ಮುಖ್ಯಮಂತ್ರಿಗೆ ಮನವಿ
10 ದಿನಗಳಲ್ಲಿ ನೇಕಾರರ ಸಮಸ್ಯೆಗಳಿಗೆ ಪರಿಹಾರ, ಸಚಿವ ಶ್ರೀರಾಮುಲು ಭರವಸೆ