April 26, 2024

Bhavana Tv

Its Your Channel

ಶ್ರೀರಾಮದೇವರ ಗುಡ್ಡದ ಮೇಲೆ ಪೀಠದೊಡನೆ ೨೫ ಅಡಿ ಪಂಚಮುಖಿ ಆಂಜನೇಯನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಂಕಲ್ಪ

ಗುoಡ್ಲಪೇಟೆ :– ಶ್ರೀ ಪಂಚಮುಖಿ ಆಂಜನೇಯ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನ ಸೇವಾ ಸಮಿತಿ. ಶ್ರೀ ರಾಮದೇವರ ಗುಡ್ಡ, ಗುಂಡ್ಲಪೇಟೆ (ವಿಜಯಪುರ)ಚಾಮರಾಜನಗರ ಜಿಲ್ಲೆ.

ಶ್ರೀ ಗುರು ಸಾರ್ವಭೌಮರ ಹಾಗೂ ಶ್ರೀ ಶ್ರೀ ಶ್ರೀ ೧೦೦೮ ಸುಬುದೇಂದ್ರ ಶ್ರೀಗಳವರ ಆಶೀರ್ವಾದ ಕೋರುತ್ತಾ ಶ್ರೀ ಮಠದ ಪಕ್ಕದಲ್ಲಿನ ಶ್ರೀರಾಮದೇವರ ಗುಡ್ಡದ ಮೇಲೆ ಪೀಠದೊಡನೆ ೨೫ ಅಡಿ ಪಂಚಮುಖಿ ಆಂಜನೇಯನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಂಕಲ್ಪಿಸಲಾಗಿದೆ, ಈ ಪುಣ್ಯದ ಧಾರ್ಮಿಕ ಯೋಜನೆಯನ್ನು ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನ ಟ್ರಸ್ಟ್ ಹಾಗೂ ಸೇವಾ ಸಮಿತಿ ಗುಂಡ್ಲುಪೇಟೆ ವತಿಯಿಂದ ಸಾರ್ವಜನಿಕ ಭಕ್ತಾದಿಗಳ ಸಹಕಾರದೊಂದಿಗೆ ಕೈಗೊಳ್ಳಲು ನಿರ್ಧರಿಸಲಾಗಿದೆ. ಭಕ್ತಾದಿಗಳು ಉದಾರವಾಗಿ ಕಟ್ಟಡದ ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿಗಳು, ಹಾಗೂ ತನು ಮನ ಧನಗಳೊಂದಿಗೆ ನೆರವಾಗಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ರಾಜೇಶ್ವರಿ ಚಂದ್ರಶೇಖರ್, ೯೪೪೮೦೪೬೧೪೭ ದೇಣಿಗೆ ನೀಡುವ ಮಹಾದಾನಿ ಗಳು ಈ ಕೆಳಕಂಡ ಟ್ರಸ್ಟ್ ಖಾತೆಗೆ ಜಮಾ ಮಾಡಬಹುದು.

Sri Raghavendra Swamy gala Mrithika Brundavana Sannidana Trust.

A/c no.3080101006232

IFSC code no.CNRB0011716

Canara bank,J.P.Nagar branch,Mysuru-570008

error: