May 18, 2024

Bhavana Tv

Its Your Channel

ಆಂಗ್ಲ ಭಾಷೆ ನಾಮಫಲಕವನ್ನು ತೆರವುಗೊಳಿಸುವಂತೆ ಪುರಸಭೆ ಅಧ್ಯಕ್ಷರಿಗೆ ಮನವಿ

ಗುಂಡ್ಲುಪೇಟೆ ಪಟ್ಟಣದ ಅಂಗಡಿಗಳ ಮುಂಭಾಗ ಕಡ್ಡಾಯವಾಗಿ ಕನ್ನಡ ನಾಮಫಲಕವನ್ನು ಅಳವಡಿಸಲು ಸೂಚಿಸಬೇಕು ಮತ್ತು ಅಳವಡಿಸಿರುವ ನಾಮಫಲಕವೂ ಕನ್ನಡದಲ್ಲಿ ಇರಬೇಕು ಎಂದು ಪುರಸಭೆ ಅಧ್ಯಕ್ಷರಿಗೆ ಕರ್ನಾಟಕ ಕಾವಲು ಪಡೆಯ ಸಂಘಟನೆಯವರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾವಲು ಪಡೆಯ ತಾಲೂಕು ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ಮಾತನಾಡಿ ಪಟ್ಟಣದಲ್ಲಿ ಹಲವಾರು ಅಂಗಡಿ ಮಳಿಗೆ ಮುಂದೆ ಸಂಪೂರ್ಣ ಆಂಗ್ಲಭಾಷೆ ನಾಮಫಲಕ ವನ್ನೂ ತೆರವುಗೊಳಿಸಿ ಎಲ್ಲಾ ಮಳಿಗೆ ಮುಂಭಾಗ ಕಡ್ಡಾಯವಾಗಿ ಕನ್ನಡ ನಾಮಫಲಕವನ್ನು ಅಳವಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಸಿ ಬಳಿಯುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಪಿ ಗಿರೀಶ್, ವೆಂಕಟೇಶ್ ಗೌಡ್ರು, ಇಲಿಯಾಸ್ ,ಸಾಧಿಕ್ ಪಾಶ, ಶಕೀಲಾ, ಹೆಚ್ ರಾಜು, ಮಿಮಿಕ್ರಿ ರಾಜು ,ಹಾಗೂ ಪುರಸಭಾ ಸದಸ್ಯರುಗಳು ಹಾಜರಿದ್ದರು.
ವರದಿ:ಸದಾನಂದ ಕನ್ನೇಗಾಲ

error: