May 8, 2024

Bhavana Tv

Its Your Channel

ದಲಿತ ಸಂಘರ್ಷ ಸಮಿತಿ ಯಾವುದೇ ಜಾತಿ, ಮತ, ರಾಜಕೀಯಕ್ಕೆ ಸೀಮಿತವಲ್ಲ- ಬಿ.ವಿ. ವೆಂಕಟರವಣ

ಬಾಗೇಪಲ್ಲಿ,: ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಿಟ್ಟೇಮರಿ ಹೋಬಳಿ ಶಾಖೆ ಮಟ್ಟದ ಸರ್ವ ಸದ್ಯಸ್ಯರ ಸಾಮಾನ್ಯ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಯಾವುದೇ ಜಾತಿ, ಮತ, ರಾಜಕೀಯಕ್ಕೆ ಸೀಮಿತವಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರು ಬಿ.ವಿ. ವೆಂಕಟರವಣ ತಿಳಿಸಿದರು.

ಸುಮಾರು ೪ ದಶಕ ಗಳಿಂದ ದಲಿತರ ಪರ ದ್ವನಿ ಎತ್ತಿ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ದಲಿತರಲ್ಲಿ ಜಾಗೃತಿ ಮೂಡಿಸಿ ಡಾ ಬಿ ಆರ್ ಅಂಬೇಡ್ಕರ್ ರವರ ತತ್ವ ಸಿದ್ದಂತಗಳನ್ನು ಮತ್ತು ಸಂವಿಧಾನ ಬದ್ದವಾದ ಆಶಯ ಗಳನ್ನು ಜಾರಿಗೊಳಿಸುವಂತಹ ಪ್ರಾಮಾಣಿಕ ಪ್ರಯತ್ನ ವನ್ನು ದಲಿತ ಸಂಘರ್ಷ ಸಮಿತಿ ಮಾಡಿಕೊಂಡು ಬರುತ್ತಿದೆ. ಹಾಗೂ ಯಾವುದೇ ಜಾತಿ ಮತಕ್ಕೆ, ರಾಜಕೀಯಕ್ಕೆ ದಲಿತ ಸಂಘರ್ಷ ಸಮಿತಿ ಸೀಮಿತ ಅಲ್ಲ, ಯಾವುದೇ ಜನ ಸಾಮಾನ್ಯರಿಗೆ ಶೋಷಣೆಗೆ ಮತ್ತು ಅನ್ಯಾಯಕ್ಕೆ ಒಳಗಾದವರಿಗೆ, ದ್ವನಿ ಎತ್ತಿ ಹೋರಾಟಗಳನ್ನು ಮಾಡುವ ಮೂಲಕ ಶ್ರಮಿಸುತ್ತಿದೆ ಎಂದು ಬಿ.ವಿ. ವೆಂಕಟರವಣ ಹೇಳಿದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: