
ಹೊನ್ನಾವರ ಮಾ. ೨೯ : ದಯವಿಟ್ಟು ಯಾರೂ ಮನೆ ಗೇಟ್ ಬಿಟ್ಟು ಹೊರಗೆ ಬರಬೇಡಿ. ಮನೆ ಹಾಗೂ ಮನೆಯ ಕಂಪೌAಡ ಒಳಗೆ ಇರಿ. ಪದೇಪದೇ ಹೊರಗೆ ಬರುವವರು, ಪೇಪರ್ ಹಾಕುವವರು, ಹಾಲು ಕೊಡುವವರು, ತರಕಾರಿ ಅಂಗಡಿ, ಔಷಧ ಅಂಗಡಿ, ದಿನಸಿ ಅಂಗಡಿಯಲ್ಲಿ ಜನರ ಜೊತೆ ವ್ಯವಹರಿಸುವವರು ಹಾಗೂ ಮನೆಯಲ್ಲಿ ಹಿರಿಯರೊಂದಿಗೆ ಬೆರೆಯದೆ ೬ಫೂಟ್ ಅಂತರ ಕಾಪಾಡಿಕೊಳ್ಳುವುದು. ಪೇಪರ್ ಬಂದ ತಕ್ಷಣ ಓದಿ ಹೊರಮೈ ಮುಟ್ಟದೇ ಮಡಿಸಿ ಒಳ ಮೈ ಮೇಲೆ ಮಾಡಿ ಬದಿಗೆ ಸರಿಸಿ ಕೈ ತೊಳೆದುಕೊಳ್ಳಿ. ಪದೇಪದೇ ಮುಟ್ಟಬೇಡಿ, ಹಾಲು ಪ್ಯಾಕೆಟ್ ಬಂದ ತಕ್ಷಣ ಪಾತ್ರೆಗೆ ಹಾಕಿ ಕೊಟ್ಟೆಯನ್ನು ಡಷ್ಟಬಿನ್ಗೆ ಹಾಕಿ ಕೈ ತೊಳೆದುಕೊಳ್ಳಿ. ಆದಷ್ಟು ಪ್ಲಾಸ್ಟಿಕ್ ಬಳಕೆ ಬೇಡ. ಪೇಪರ್ ಅಥವಾ ಬಟ್ಟೆ ಚೀಲ ಉಪಯೋಗಿಸಿ, ಪದೇಪದೇ ವಸ್ತುಗಳನ್ನು ಮುಟ್ಟಬೇಡಿ, ಪದೇಪದೇ ಕೈ ತೊಳೆದುಕೊಳ್ಳಿ, ಮೆತ್ತಗೆ ಮಾತನಾಡಿದರೆ ಒಳ್ಳೆಯದು, ಗಟ್ಟಿಯಾಗಿ ಗಂಟಲು ಒತ್ತಿ ಮಾತನಾಡಬೇಡಿ ಎಂದು ಸಲಹೆ ನೀಡಿದ್ದಾರೆ.
More Stories
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜು ಶೇಕಡಾ 99.25% ಫಲಿತಾಂಶವನ್ನು ದಾಖಲಿಸಿದೆ.
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ದಿನಕರ ಶೆಟ್ಟಿ ನಾಮಪತ್ರ ಸಲ್ಲಿಕೆ.
ದಾಖಲೆಯಿಲ್ಲದೆ ಸಾಗಿಸುತಿದ್ದ 51.20 ಲಕ್ಷ ನಗದು ವಶ