
ನಾಡಿನ ಹಿರಿಯ ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಖ್ಯಾತ ಚುಟುಕು ಕವಿ ಎಂದೇ ಪ್ರಸಿದ್ಧರಾದ ವಿಡಂಬಾರಿಯವರು ಈಗ ಕಡತೋಕೆಯಲ್ಲಿ ಮಗಳ ಮನೆಯಲ್ಲಿ ನಮ್ಮನ್ನಗಲಿರುವುದು ಅಂತ್ಯಂತ ದುಃಖದ ಸಂಗತಿ. ಇವರು1935 ಫೆಬ್ರುವರಿ 29 ಜನಿಸಿದವರು. ದೇವದಾಸಿಯ ಮಗನಾಗಿ ಹುಟ್ಟಿ ಈ ಸಮಾಜದ ಬದಲಾವಣೆಗೆ ತನ್ನ ಕೆಲಸ, ಚಿಂತನೆಗಳ ಮೂಲಕ ಕೊನೆಯ ವರೆಗೆ ಶ್ರಮಿಸಿದವರು. ಕಡುಬಡತನದ ಮಧ್ಯೆಯೂ ಮಾನವೀಯ ಮೌಲ್ಯಗಳಿಗಾಗಿ ತುಡಿದವರು. ಸದಾ ಸಮಾಜಮುಖಿ ಚಿಂತನೆ ಮೈಗೂಡಿಸಿಕೊಂಡ ಇವರು ಮೂಢನಂಬಿಕೆ ವಿರುದ್ಧ ಪ್ರಕರವಾಗಿ ಚುಟುಕು ಬರೆಯುತ್ತಿದ್ದರು. ಅಂಚೆ ಪೇದೆಯ ಆತ್ಮಕತೆಯನ್ನೂ ಒಳಗೊಂಡು ಐದಕ್ಕೂ ಹೆಚ್ಚು ಪ್ರಕಟಿತ ಬರಹಗಳನ್ನು ಹೊರತಂದಿದ್ದಾರೆ.
More Stories
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.
ಭಟ್ಕಳದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ,