ನಾಡಿನ ಹಿರಿಯ ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಖ್ಯಾತ ಚುಟುಕು ಕವಿ ಎಂದೇ ಪ್ರಸಿದ್ಧರಾದ ವಿಡಂಬಾರಿಯವರು ಈಗ ಕಡತೋಕೆಯಲ್ಲಿ ಮಗಳ ಮನೆಯಲ್ಲಿ ನಮ್ಮನ್ನಗಲಿರುವುದು ಅಂತ್ಯಂತ ದುಃಖದ ಸಂಗತಿ. ಇವರು1935 ಫೆಬ್ರುವರಿ 29 ಜನಿಸಿದವರು. ದೇವದಾಸಿಯ ಮಗನಾಗಿ ಹುಟ್ಟಿ ಈ ಸಮಾಜದ ಬದಲಾವಣೆಗೆ ತನ್ನ ಕೆಲಸ, ಚಿಂತನೆಗಳ ಮೂಲಕ ಕೊನೆಯ ವರೆಗೆ ಶ್ರಮಿಸಿದವರು. ಕಡುಬಡತನದ ಮಧ್ಯೆಯೂ ಮಾನವೀಯ ಮೌಲ್ಯಗಳಿಗಾಗಿ ತುಡಿದವರು. ಸದಾ ಸಮಾಜಮುಖಿ ಚಿಂತನೆ ಮೈಗೂಡಿಸಿಕೊಂಡ ಇವರು ಮೂಢನಂಬಿಕೆ ವಿರುದ್ಧ ಪ್ರಕರವಾಗಿ ಚುಟುಕು ಬರೆಯುತ್ತಿದ್ದರು. ಅಂಚೆ ಪೇದೆಯ ಆತ್ಮಕತೆಯನ್ನೂ ಒಳಗೊಂಡು ಐದಕ್ಕೂ ಹೆಚ್ಚು ಪ್ರಕಟಿತ ಬರಹಗಳನ್ನು ಹೊರತಂದಿದ್ದಾರೆ.
More Stories
ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣೆಯವರು ನಡೆಸಿದ ಅಣಕು ಕಾರ್ಯಾಚರಣೆಯಲ್ಲಿ ಆರು ಜನ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿ
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.