May 6, 2024

Bhavana Tv

Its Your Channel

ಮಂಕಿಯಲ್ಲಿ ಹಿಂಸಾತ್ಮಕವಾಗಿ ಗೋಸಾಗಟ ವಾಹನ ಪತ್ತೆಹಚ್ಚಿದ ಪೋಲಿಸರು: ಆರೋಪಿ ಅರೆಸ್ಟ

ಹೊನ್ನಾವರ: ಕಂಟೇನರ್ ಲಾರಿಯಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿಕೊoಡು ಹೋಗುತ್ತಿದ್ದ ಲಾರಿಯನ್ನು ಅನಂತವಾಡಿ ಚೆಕ್‌ಪೋಸ್ಟ್ನಲ್ಲಿ ತಡೆದ ಮಂಕಿ ಹಾಗೂ ಮುರ್ಡೇಶ್ವರ ಠಾಣೆಯ ಪೊಲೀಸರು ೧೫ ಜಾನುವಾರುಗಳನ್ನು ರಕ್ಷಿಸಿ ಭಟ್ಕಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಶುಕ್ರವಾರ ಬೆಳಗ್ಗೆ ವರದಿಯಾಗಿದೆ.
ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಯಂತೆ ಮಂಕಿ ಹಾಗೂ ಮುರ್ಡೇಶ್ವರ ಠಾಣೆಯ ಸಿಬ್ಬಂದಿಗಳ ತಂಡದೊoದಿಗೆ ಎ.ಎಸ್ಪಿ ನಿಖಿಲ್ ಬಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದಿದ್ದ ಮಂಕಿ ಠಾಣೆಯ ಪಿ.ಎಸ್.ಐ ಪರಮಾನಂದ ಬಿ ಕೊಣ್ಣೂರ ಜಿ.ಎ.೦೭ ಎಪ್.೬೬೭೭ ನಂಬರ್‌ನ ಲಾರಿಯನ್ನು ತಡೆದು ಪರಿಶೀಲಿಸಿದಾಗ ಲಾರಿಯ ಒಳಗೆ ೩ ಕೋಣ ಒಂದು ಎಮ್ಮೆ ಹಾಗೂ ೧೧ ಎತ್ತು ಒಟ್ಟೂ ೧೫ ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿರುವುದು ಕಂಡುಬoದಿದೆ. ಲಾರಿಯ ಚಾಲಕ ಭಟ್ಕಳ ಮೂಲದ ನಝರುಲ್ಲಾ ಬಶೀರ್ ಸಾಬ್ ಹಾಗೂ ಕ್ಲೀನರ್ ಮಹಮದ್ ಹುಸೇನ್ ಎಂಬಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಟುಕರಿಂದ ವಶಪಡಿಸಿಕೊಂಡ ಜಾನುವಾರುಗಳನ್ನು ಠಾಣೆಯ ಪಕ್ಕದ ಶೆಡ್‌ನಲ್ಲಿ ಕಟ್ಟಿ ಆರೈಕೆ ಮಾಡಲಾಗುತ್ತಿದೆ. ಕಲಘಟಗಿಯಿಂದ ಜಾನುವಾರುಗಳನ್ನು ತಂದಿರುವುದಾಗಿ ಆರೋಪಿಗಳು ಬಾಯಿಬಿಟ್ಟಿದ್ದು ನಿಜಾಂಶ ತನಿಖೆಯಿಂದಷ್ಟೇ ಹೊರಬರಬೇಕಿದೆ.

error: