May 5, 2024

Bhavana Tv

Its Your Channel

ರಷ್ಯಾ ಮತ್ತು ಕಝಕಿಸ್ತಾನದ ಪ್ರಜೆಗಳು ಎನ್ನಲಾದ ಇಬ್ಬರು ವಿದೇಶಿ ಪ್ರಜೆಗಳು ರೈಲಿನಲ್ಲಿ ಬಂದಿಳಿದು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ರಾತ್ರಿ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಭಟ್ಕಳ ; ಶುಕ್ರವಾರ ರಾತ್ರಿ ೧೧=೪೦ ಕ್ಕೆ ಭಟ್ಕಳಕ್ಕೆ ಬಂದ ಮಂಗಳ ಎಕ್ಷಪ್ರೆಸ್ ರೈಲಿನಲ್ಲಿ ಇಬ್ಬರು ವಿದೇಶಿಗರು ಬಂದಿಳಿದ್ದಾರೆ. ರೈಲಿನಿಂದ ಇಳಿದು ಅಡಗಿಕೊಂಡಿದ್ದ ವಿದೇಶಿಯರನ್ನು ನೋಡಿದ ಕಂದಾಯ ಇಲಾಖೆಯ ಸಿಬ್ಬಂದಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರು ನಗರಠಾಣೆಗೆ ಮಾಹಿತಿ ನೀಡಿದ್ದಾರೆ. ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಸಹಾಯದಿಂದ ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲಿಂದ ಬಂದಿದ್ದಿರಿ, ಭಟ್ಕಳಕ್ಕೆ ಯಾಕೆ ಬಂದಿದ್ದಿರಿ, ದಾಖಲೆ ತೋರಿಸಿ ಎಂದು ವಿಚಾರಣೆ ನಡೆಸಿದ್ದಾರೆ. ಗೋವಾದಿಂದ ಬಂದಿದ್ದು ಗೋಕರ್ಣ ಹೋಗಬೇಕಿತ್ತು ದಾರಿ ತಪ್ಪಿ ಭಟ್ಕಳಕ್ಕೆ ಬಂದು ಇಳಿದಿದ್ದೇವೆ ಎಂದು ವಿದೇಶಿಗರು ಹೇಳಿದ್ದಾರೆ.
ಒಂದೆಡೆ ಕರೊನಾ ಆತಂಕ, ಇನ್ನೊಂದೆಡೆ ಅನುಮಾನದ ವರ್ತನೆ ವಿದೇಶಿಗರ ಈ ನಡೆ ಅನುಮಾನಕ್ಕೆ ಈಡು ಮಾಡಿತ್ತು.

error: