ದಕ್ಷಿಣ ಕನ್ನಡ; ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಆವರಣದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಂಪರ್ಕ ರಹಿತ ಸ್ವಯಂಚಾಲಿತ ತೀರ್ಥ ನೀಡುವ ಯಂತ್ರವನ್ನು ಸಂಸ್ಥೆಯ ಪ್ರಾಂಶುಪಾಲ ನಿರಂಜನ ಚಿಪ್ಲೂಂಕರ್ ಲೊಕಾರ್ಪಣೆ ಗೊಳಿಸಿದರು.
ಸಂಸ್ಥೆಯ ಐ ಎಸ್ ವಿಭಾಗದ ಡಾ. ಸಂತೋಷ ಅವಿಷಕಾರಗೊಳಿಸಿ, ಅವರ ತಂದೆ ಚಿನ್ನಪ್ಪ ಹಾಗೂ ಸಿನ್ ಥಾನ್ ಎಲೆಕ್ಟ್ರೊನಿಕ್ಸ್ ಸಹಕಾರದೊಂದಿಗೆ ಸುಮಾರು ₹2700 ಮೌಲ್ಯದಲ್ಲಿ ಈ ಯಂತ್ರವನ್ನು ತಯಾರಿಸಿರುತ್ತಾರೆ.
ಭಕ್ತಾದಿಗಳು ಯಂತ್ರದ ಮುಂದೆ ಕೈ ಚಾಚಿದಾಗ ಸ್ವಯಂ ಚಾಲಿತವಾಗಿ ಸಂಪರ್ಕರಹಿತವಾಗಿ ನಿರ್ದಿಷ್ಟ ಪ್ರಮಾಣದಲ್ಲಿ ತೀರ್ಥ ಕೈ ಮೇಲೆ ಬೀಳುತ್ತದೆ. ಈ ನೂತನ ಅವಿಷ್ಕಾರ ದೇವಸ್ಥಾನಗಳಲ್ಲಿ ಭಕ್ತರಿಗೆ ಸಂಪರ್ಕರಹಿತ ತೀರ್ಥ ನೀಡುವಲ್ಲಿ ಸಹಕಾರಿಯಾಗಿದೆ.
ಅರುಣ ಭಟ್ ಕಾರ್ಕಳ
More Stories
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತಿ ಸಂಗೀತ
ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ
ವಿಜೃಂಭಣೆಯಿoದ ನಡೆದ ಶ್ರೀ ಶಾರದಾ ಶತಮಾನೋತ್ಸವ