May 5, 2024

Bhavana Tv

Its Your Channel

ದೇವಸ್ಥಾನಗಳಲ್ಲಿ ತೀರ್ಥ ನೀಡಲು ಸಂಪರ್ಕರಹಿತ ಸ್ವಯಂ ಚಾಲಿತ ಯಂತ್ರ ಲೋಕಾರ್ಪಣೆ…

ದಕ್ಷಿಣ ಕನ್ನಡ; ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಆವರಣದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಂಪರ್ಕ ರಹಿತ ಸ್ವಯಂಚಾಲಿತ ತೀರ್ಥ ನೀಡುವ ಯಂತ್ರವನ್ನು ಸಂಸ್ಥೆಯ ಪ್ರಾಂಶುಪಾಲ ನಿರಂಜನ ಚಿಪ್ಲೂಂಕರ್ ಲೊಕಾರ್ಪಣೆ ಗೊಳಿಸಿದರು‌.

ಸಂಸ್ಥೆಯ ಐ ಎಸ್ ವಿಭಾಗದ ಡಾ. ಸಂತೋಷ ಅವಿಷಕಾರಗೊಳಿಸಿ, ಅವರ ತಂದೆ ಚಿನ್ನಪ್ಪ ಹಾಗೂ ಸಿನ್ ಥಾನ್ ಎಲೆಕ್ಟ್ರೊನಿಕ್ಸ್ ಸಹಕಾರದೊಂದಿಗೆ ಸುಮಾರು ₹2700 ಮೌಲ್ಯದಲ್ಲಿ ಈ ಯಂತ್ರವನ್ನು ತಯಾರಿಸಿರುತ್ತಾರೆ.

ಭಕ್ತಾದಿಗಳು ಯಂತ್ರದ ಮುಂದೆ ಕೈ ಚಾಚಿದಾಗ ಸ್ವಯಂ ಚಾಲಿತವಾಗಿ ಸಂಪರ್ಕರಹಿತವಾಗಿ ನಿರ್ದಿಷ್ಟ ಪ್ರಮಾಣದಲ್ಲಿ ತೀರ್ಥ ಕೈ ಮೇಲೆ ಬೀಳುತ್ತದೆ. ಈ ನೂತನ ಅವಿಷ್ಕಾರ ದೇವಸ್ಥಾನಗಳಲ್ಲಿ ಭಕ್ತರಿಗೆ ಸಂಪರ್ಕರಹಿತ ತೀರ್ಥ ನೀಡುವಲ್ಲಿ ಸಹಕಾರಿಯಾಗಿದೆ.

ಅರುಣ ಭಟ್ ಕಾರ್ಕಳ

error: