May 5, 2024

Bhavana Tv

Its Your Channel

ಕರೊನಾ ಹಿನ್ನಲೆ: ಸರಳವಾಗಿ ಜರುಗಿದ ಕಾಬೆಟ್ಟು ಚೋಲ್ಪಾಡಿ ವೇಣುಗೋಪಾಲ ಕೃಷ್ಣ ದೇವರ ಪ್ರತಿಷ್ಟಾಮಹೋತ್ಸವ.

ಉಡುಪಿ: ಕಾರ್ಕಳ ಕಾಬೆಟ್ಟು ವೇಣುಗೋಪಾಲ ಕೃಷ್ಣ ದೇವಸ್ಥಾನ ದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯಬೇಕಿದ್ದ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಕೊರೊನಾ ವೈರಸ್‌ನಿಂದಾಗಿ ಲಾಕ್ ಡೌನ್ ಹಿನ್ಲೆಯಲ್ಲಿ ಮುಂದೂಡಲಾಗಿತ್ತು. ಕಾರ್ಕಳ ದ ಕಾಬೆಟ್ಟು ಚೋಲ್ಪಾಡಿ ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನ ದ ದೇವರ ಸನ್ನಿಧಾನದಲ್ಲಿ ರವಿವಾರ ಮತ್ತು ಸೋಮವಾರ ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಈ ಕುರಿತು ಶ್ರೀನಿವಾಸ ಉಪಾಧ್ಯಾಯ ಅರ್ಚಕರು ದುರ್ಗಾಪರಮೇಶ್ವರಿ ದೇವಸ್ಥಾನ ಬಪ್ಪನಾಡು ಇವರು ಕಾರ್ಯಕ್ರಮ ದ ಬಗ್ಗೆ ಮಾಧ್ಯಮಕ್ಕೆ ವಿವರ ನೀಡಿದರು.ದೇವಸ್ಥಾನ ದ ಆಡಳಿತದ ಮಂಡಳಿಯ ಮುಕ್ತೇಸರರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಸದಸ್ಯರು ಅರ್ಚಕ ವೃಂದದವರು ಭಕ್ತಾದಿಗಳು ಉಪಸ್ಥಿತರಿದ್ದರು .

ವರದಿ:- ಅರುಣ ಕುಮಾರ. ಕಾರ್ಕಳ

error: