April 26, 2024

Bhavana Tv

Its Your Channel

ಗೌಡಳ್ಳಿ ಗ್ರಾಮ ಪಂಚಾಯಿತಿ ಮುಂದೆ ಉದ್ಯಾನವನದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಶಿವರಾಮೇಗೌಡರ ಕರವೇ ಕಾರ್ಯಕರ್ತರಿಂದ ಮನವಿ

ಕೊಡಗು:– ಗೌಡಳ್ಳಿ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗೌಡಳ್ಳಿ ಈ ಎರಡು ಕಟ್ಟಡದ ಮುಂದೆ ಉದ್ಯಾನವನದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಶಿವರಾಮೇಗೌಡರ ಕರವೇ ಕಾರ್ಯಕರ್ತರಿಂದ ಮನವಿ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ಕಟ್ಟಡದ ಮುಂದೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗೌಡಳ್ಳಿ ಎರಡು ಕಟ್ಟಡದ ಮುಂಭಾಗದಲ್ಲಿ ಉದ್ಯಾನವನ ನಿರ್ಮಾಣ ಮಾಡಲು ಪಂಚಾಯಿತಿಯಿAದ ನಿರ್ಧರಿಸಿರುತ್ತಾರೆ ಈ ಉದ್ಯಾನವನಕ್ಕೆ ಅಂದಾಜು ಮೊತ್ತ 3.5 ಲಕ್ಷ ದಿಂದ 4 ಲಕ್ಷ ರೂ ಹಣ ಇಟ್ಟು ಕೆಲಸ ಮಾಡಲು ತಿರ್ಮಾನಿಸಲಾಗಿರುತ್ತದೆ. ಅದರಂತೆ ಕೆಲಸ ಆರಂಭವಾಗಿ 6 ತಿಂಗಳು ಕಳೆದರೂ ಲಕ್ಷಾಂತರ ಹಣ ಖರ್ಚು ಮಾಡಿದರು ಉದ್ಯಾನವನ ಕನಸಾಗೇ ಉಳಿದಿದೆ. ಇದಕ್ಕೆ ನಿರ್ಮಿಸಲಾದ ಇಂಟರ್ ಲಾಕ್ ಮುಂತಾದ ಸಿಮೆಂಟ್ ಕೆಲಸಗಳು ಸಂಪೂರ್ಣವಾಗಿ ಒಡೆದು ಹೋಗಿರುತ್ತದೆ ಇವೆಲ್ಲವೂ ಸರಿಪಡಿಸಿ ಬೇಗನೆ ಒಂದು ಸುಂದರವಾದ ಉದ್ಯಾನವನ ನಿರ್ಮಾಣ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷರು ಪ್ರಾಸಿಸ್ ಡಿಸೋಜ ಹಾಗೂ ಕಾರ್ಯಕರ್ತರು ಮನವಿ ಮಾಡಿಕೊಳ್ಳಿದ್ದಾರೆ,

error: