May 8, 2024

Bhavana Tv

Its Your Channel

ದೇವಸ್ಥಾನದ ಹುಂಡಿ ಹಣ ಕಳ್ಳತನ ಮಾಡಿದ ದುಷ್ಕರ್ಮಿಗಳು

ಮಂಡ್ಯ: ದೇವಸ್ಥಾನದ ಬಾಗಿಲು ಮುರಿದು ದೇವಸ್ಥಾನದ ಹುಂಡಿ ಅಪಹರಿಸಿರುವ ಘಟನೆ ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ಪುರಾಣ ಪ್ರಸಿದ್ಧ ಕಂಚಿ ವರದರಾಜಸ್ವಾಮಿ ದೇಗುಲವನ್ನು ತಡರಾತ್ರಿ ಬೀಗ ಮುರಿದ ದುಷ್ಕರ್ಮಿಗಳು ಹುಂಡಿಯನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ರವಿಕಿರಣ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಕೂಗಳತೆಯ ದೂರದಲ್ಲಿರುವ ಎಂ.ಹೊಸೂರು ಗೇಟ್ ಬಳಿ ದೇವಾಲಯದ ಹುಂಡಿಯ ಹಣ ದೋಚಿ ಹುಂಡಿಯನ್ನು ಗದ್ದೆಯೊಂದರಲ್ಲಿ ಬಿಸಾಕಿ ಹೋಗಿದ್ದಾರೆ.

ಹುಂಡಿಯನ್ನು ವಶಪಡಿಸಿಕೊಂಡಿರುವ ಪೋಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವರದಿ:ಚoದ್ರಮೌಳಿ ನಾಗಮಂಗಲ

error: