May 5, 2024

Bhavana Tv

Its Your Channel

ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವುದು ಪ್ರತಿ ಪ್ರಜೆಗಳ ಕರ್ತವ್ಯವಾಗಿದೆ – ಚೌಡೇನಹಳ್ಳಿ ಗ್ರಾ. ಪಂ ಸದಸ್ಯೆ ಜಯಲಕ್ಷ್ಮಮ್ಮ

ಕಿಕ್ಕೇರಿ: ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷರು ಹಾಗೂ ಜೆ.ಡಿ.ಎಸ್ ಪಕ್ಷದ ಪ್ರಭಾವಿ ನಾಯಕರಾದ ಬಿ.ಎಂ ಕಿರಣ್ ರವರ ಸಹಕಾರದೊಂದಿಗೆ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಎಲ್ಲಾ ಬಸ್ ನಿಲ್ದಾಣಗಳನ್ನು ಸ್ವಚಗೊಳಿಸಿ ಬಣ್ಣ ಬಳಿಯುವ ಮೂಲಕ ಮೆರಗು ನೀಡುತ್ತಾ ಇದ್ದಾರೆ ಇವರ ಈ ಜನಪರ ಕಾಳಜಿ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು..

ಎಷ್ಟೋ ವರ್ಷಗಳಿಂದ ಸಾರ್ವಜನಿಕರ ಸ್ಥಳಗಳಾದ ಬಸ್ ನಿಲ್ದಾಣಗಳು ಗಿಡ ಗೆಂಡೆಗಳು ಬೆಳದ್ದು ಗಬ್ಬೆದ್ದು ನಾರುತ್ತಿದ್ದವು ಆದರೆ ಬಿ.ಎಂ ಕಿರಣ್ ಗ್ರಾಮೋಧರಕ ಯೋಜನೆಯನ್ನು ರೂಪಿಸಿಕೊಂಡು ಈಗಾಗಲೇ ಕೃಷ್ಣಾಪುರ, ಚಿಕ್ಕಳಲೆ, ಆನೆಗೊಳ, ಮಂಡಲಿಕನಹಳ್ಳಿ, ತೆಂಗಿನಘಟ್ಟ ಬಸ್ ನಿಲ್ದಾಣಗಳನ್ನು ಸ್ಚಚತೆಗೊಳಿಸಿ ಬಣ್ಣ ಬಳಿದು ಮೆರಗು ನೀಡಿದ್ದಾರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಬಸ್ ನಿಲ್ದಾಣಗಳನ್ನು ತಮ್ಮ ಸ್ವಂತ ಹಣ ಖರ್ಚಿನಿಂದ ಮೆರುಗು ನೀಡಲಿದ್ದಾರೆ ಅಲ್ಲದೆ ಲಾಕ್ ಡೌನ್ ಸಂರ್ಭದಲ್ಲಿ ಪ್ರತಿ ಹಳ್ಳಿ ಹಳ್ಳಿ ರೈತರ ಹಾಗೂ ಸಾರ್ವಜನಿಕರ ನೆರೆವಿಗೆ ನಿಂತು ಸುಮಾರು 20 ಸಾವಿರ ಕಿಟ್ ವಿತರಿಸಿ ಬಡವರ ಪಾಲಿಗೆ ಬೆಳಕಾಗಿದ್ದು ಇಂತಹ ಮುಗ್ದತೆ ಮನಸ್ಸಿನ ಬಿ.ಎಂ ಕಿರಣ್ ರವರು ರಾಜಕೀಯಕ್ಕೆ ಬಂದು ಹೆಚ್ಚುನ ರೀತಿಯಲ್ಲಿ ಜನರ ಸೇವೆ ಮಾಡಲು ಮುಂದಾಗಬೇಕು ಎಂದು ಹಾರೈಸಿದರು..

ಈ ಸಂದರ್ಭದಲ್ಲಿ ಕಾರ್ಯಕ್ರಮ ಹರೀಶ್, ಶಿವು, ರಾಜೇಶ್, ಅನೀಲ್, ಪಾಪಣ್ಣಿ, ಸೇರಿದಂತೆ ಹತ್ತಾರು ಅಭಿಮಾನಿಗಳು ಇದ್ದರು…

ವರದಿ: ಶಂಭು ಕಿಕ್ಕೇರಿ

error: