ಕಿಕ್ಕೇರಿ:-ಜಿಲ್ಲೆಯ ಅಭಿವೃದ್ಧಿಯೇ ನನ್ನ ಗುರಿ ಇನ್ನೂ ಒಂದು ತಿಂಗಳಲ್ಲಿ ಆನೆಗೊಳ ಗ್ರಾಮದಿಂದ ಆಶೋಕ ನಗರದವರೆಗೆ ಮೈಸೂರು ಅರಸಿಕೆರೆ ರಸ್ತೆ ನವೀಕರಣ ಕಾಮಗಾರಿ ಆರಂಭವಾಗುವುದು ಎಂದು ರೇಷ್ಮೆ ಮತ್ತು ಕ್ರೀಡೆ ಯುವ ಸಬಲೀಕರಣ ಸಚಿವರಾದ ಕೆ ಸಿ ನಾರಾಯಣಗೌಡ ತಿಳಿಸಿದರು
ಕೃಷ್ಣರಾಜಪೇಟೆ ತಾಲ್ಲೂಕಿನ ತೊಳಸಿ ಗೇಟ್ ಬಳಿ ಕೆಂಪೇಗೌಡರ ಒಕ್ಕಲಿಗರ ವೇದಿಕೆ ವತಿಯಿಂದ ಆಯೋಜಿದ್ದ ನಾಡ ಪ್ರಭು ಕೆಂಪೇಗೌಡ ರವರ ಜಯಂತಿ ಭಾಗವಹಿಸಿದ ಅವರು 45 ಲಕ್ಷ ರೂ ವೆಚ್ಚದ ತೊಳಸಿ ಗ್ರಾಮಕ್ಕೆ ಸಂಪರ್ಕವಿರುವ ರಸ್ತೆಯ ಗುದ್ದಲಿ ಪೂಜೆ ನೆರೆವೇರಿಸಿದರು
ನಂತರ ಪತ್ರಕರ್ತರೊಂದಿಗೆ ಮಾತನಾಡಿ ಜಿಲ್ಲೆಯ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು ಮೈಸೂರು ಮುಖ್ಯ ರಸ್ತೆ ಅಭಿವೃದ್ಧಿ ಕಾರ್ಯವು ಇನ್ನೂ ಒಂದು ತಿಂಗಳಲ್ಲಿ ಪ್ರಾರಂಭವಾಗಲಿದ್ದು ಸದ್ಯ ಆನೆಗೊಳ ಗಡಿ ಭಾಗದಿಂದ ಅಶೋಕನಗರದವರೆಗೆ ರಸ್ತೆ ನವೀಕರಣಕ್ಕೆ ಆದೇಶ ನೀಡಿದ್ದು ಶೀಘ್ರವಾಗಿ ಕಾಮಗಾರಿ ಪ್ರಾರಂಭವಾಗಲಿದೆ ಅಲ್ಲದೆ ದಿನಾಂಕ 21 ರಂದು ನಮ್ಮ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜು ಬೊಮ್ಮಾಯಿ, ಮತ್ತು ತಾಲ್ಲೂಕಿನ ಸುಪುತ್ರರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಹಲವು ಸಚಿವರು ಆಗಮಿಸಲಿದ್ದು ಅಂದೇ ಹಲವು ಅಭಿವೃದ್ಧಿ ಕಾರ್ಯಕ್ರಗಳಿಗೆ ಚಾಲನೆ ನೀಡುತ್ತೇವೆ ಮುಂದಿನ ಆರು ತಿಂಗಳಲ್ಲಿ ಶೇ90% ರಷ್ಟು ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷ ಕೆ.ಎಸ್ ಪ್ರಭಾಕರ್, ತಾಲ್ಲೂಕು ಪಂಚಾಯತಿ ಮಾಜಿ ಉಪಾದ್ಯಕ್ಷ ವಡ್ಡರಹಳ್ಳಿ ರವಿ, ಲಕ್ಷ್ಮೀಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತೊಳಸಿ ರಮೇಶ್, ಮುಖಂಡರಾದ ಶೆಟ್ಟಹಳ್ಳಿ ಕೃಷ್ಣೇಗೌಡ, ಡೈರಿ ಸ್ವಾಮಣ್ಣ, ಬಲರಾಮು, ಮಹೇಂದ್ರ, ಕೋಟಹಳ್ಳಿ ನಿಂಗರಾಜು, ತೊಳಸಿ ಗೀರಿಶ್, ಲೋಕೇಶ್ ಸೇರಿದಂತೆ ಮತ್ತಿತ್ತರರು ಇದ್ದರು…
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ