ಕೆ ಆರ್ ಪೇಟೆ ತಾಲ್ಲೂಕಿನಾದ್ಯಂತ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಂಗನವಾಡಿ ಫಲಾನುಭವಿ ಮಕ್ಕಳ ಬೆಳವಣಿಗೆ ಪರಿಶೀಲನೆ ಮಾಡುವ ಸಲುವಾಗಿ ಮಿಂಚಿನ ಸಂಚಾರ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಲಾಗಿತ್ತು
ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲೆಯ ಇತರ ತಾಲ್ಲೂಕುಗಳ ತಂಡಗಳು ಭೇಟಿ ನೀಡಿ ಅಂಗನವಾಡಿ ಫಲಾನುಭವಿ ಮಕ್ಕಳ ಬೆಳವಣಿಗೆ ಪರಿಶೀಲನೆ ಮಾಡುವ ಸಲುವಾಗಿ ಮಿಂಚಿನ ಸಂಚಾರ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದ ಆವರಣದಲ್ಲಿ ಸಿಡಿಪಿಓ ಅರುಣ್ ಕುಮಾರ್ ಚಾಲನೆ ನೀಡಿದರು.
ಭೇಟಿ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ನವ ವಧುವಿನಂತೆ ಸಿಂಗಾರಗೊAಡಿವೆ.
ತಾಲ್ಲೂಕಿನ ಶೀಳನೆರೆ ಹೋಬಳಿಯ ಚನ್ನಾಪುರ ಗ್ರಾಮದಲ್ಲಿ ಅಂಗನವಾಡಿ ಪ್ರವೇಶದ್ವಾರದಲ್ಲಿ ಸ್ವಾಗತ ಕೋರುವ ಬಣ್ಣಬಣ್ಣದ ಆಕರ್ಷಕ ರಂಗೋಲಿಗಳು, ತಳಿರು ತೋರಣಗಳು ಅಧಿಕಾರಿಗಳ ಸ್ವಾಗತಕ್ಕೆ ಸಿದ್ದವಾಗಿದ್ದವು. ಅಂಗನವಾಡಿ ಒಳಗೆ ಪ್ರವೇಶಿದರೆ ಬೊಂಬೆ ಮನೆ, ಮೆಡಿಕಲ್ ಸ್ಟೋರ್, ದೇವರಮನೆ, ಸಂಪರ್ಕ ಸಾಧನಗಳು, ಪ್ರಾಣಿ ಸಂಗ್ರಹಾಲಯ, ಗ್ರಂಥಾಲಯ, ಆಟದ ಮನೆ, ದಿನಪತ್ರಿಕೆಗಳ ವಾಚನಾಲಯ ಹೀಗೆ ವಿವಿಧ ವಿಭಾಗಗಳು ನೋಡುಗರ ಗಮನ ಸೆಳೆಯುತ್ತಿವೆ. ಅಂಗನವಾಡಿ ಶಿಕ್ಷಕಿ ಬಿ.ಬಿ. ಪ್ರಮೀಳ ಮತ್ತು ಸಹಾಯಕಿ ಹೇಮ ಇಲಾಖೆಗೆ ಸಂಬAಧಿಸಿದ ಎಲ್ಲಾ ದಾಖಲೆಗಳನ್ನು ಆಕರ್ಷಕವಾಗಿ ಇಟ್ಟುಕೊಂಡು ಮಕ್ಕಳನ್ನು ಉತ್ಸಾಹ, ಸಂತೋಷದಿAದ ಪಾಲ್ಗೊಳ್ಳುವಂತೆ ಮಾಡಲಾಗಿತ್ತು.
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ