May 18, 2024

Bhavana Tv

Its Your Channel

ಶ್ರೀಮತಿ ಗಗನ ಮತ್ತು ಶ್ರೀ ಶಿವರಾಜ್ ಸುಪುತ್ರನ ಲಹರ್ ಮೊದಲನೆಯ ವಷ೯ದ ಹುಟ್ಟುಹಬ್ಬವನ್ನು ಗಿಡಗಳನ್ನು ವಿತರಿಸುವ ಮೂಲಕ ಆಚರಣೆ

ಮಂಡ್ಯ: ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಶ್ರೀಮತಿ ಗಗನ ಮತ್ತು ಶ್ರೀ ಶಿವರಾಜ್ ಅವರ ಸುಪುತ್ರನ ಲಹರ್ ಅವರ ಮೊದಲನೆಯ ವಷ೯ದ ಹುಟ್ಟುಹಬ್ಬವನ್ನು ಗಿಡಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು. ನಂತರ ಮಾತನಾಡಿದ ಶಿವರಾಜ್ ಗಿಡನೆಟ್ಟು ನಾವು ಪೋಷಿಸಬೇಕು ಮತ್ತು ಗಿಡಗಳನ್ನು ಬೆಳೆಸಬೇಕು ಎಂದು ತಿಳಿಸಿದರು. ಹೆಚ್ಚಾಗಿ ಗಿಡಗಳನ್ನು ನೆಟ್ಟರೆ ನಮ್ಮ ಪ್ರಕೃತಿ ಸುಂದರವಾಗಿ ಮತ್ತು ಸಮೃದ್ಧಿಯಾಗಿರುತ್ತದೆ ಪ್ರಕೃತಿ ಮಾತೆ ನಮಗೆ ಅನೇಕ ಕೊಡುಗೆಗಳನ್ನು ಕೊಟ್ಟಿದೆ ನಾವು ಗಿಡಗಳನ್ನು ಪೋಷಿಸಿ ಪ್ರಕೃತಿಗೆ ಕಿರು ಕಾಣಿಕೆ ನೀಡಬೇಕು ಎಂದು ತಿಳಿಸಿದರು. ಪ್ರತಿ ಮನೆಗೆ ಒಂದೊAದು ಗಿಡಗಳನ್ನು ನೆಟ್ಟು ನಾವು ಊರನ್ನು ಸುಂದರ ವನದ ರೀತಿಯಲ್ಲಿ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕನ್ನಡ ಶಿಕ್ಷಕರಾದ ರಂಗನಾಥ, ಯುವ ಸಾಹಿತಿ ಮಹಮ್ಮದ್ ಅಜರುದ್ದೀನ್, ಜಗದೀಶ್, ಗಣೇಶ್ ಸೇರಿದಂತೆ ಅನೇಕರು ಹಾಜರಿದ್ದರು ಈ ಸಂದರ್ಭದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಗಿಡಗಳನ್ನು ವಿತರಿಸಲಾಯಿತು.

error: