ಮಂಡ್ಯ(ಡಿ.೨೬): ಕೃಷ್ಣರಾಜಪೇಟೆ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ವತಿಯಿಂದ ಹೊರತಂದಿರುವ ೨೦೨೧ರ ದಿನದರ್ಶಿಕೆ ತೂಗು ಪಂಚಾoಗದ ಕ್ಯಾಲೆಂಡರ್ ಅನ್ನು ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಅರವಿಂದಕಾರoತ್ ಬಿಡುಗಡೆ ಮಾಡಿದರು …
ಕೆ.ಆರ್.ಪೇಟೆ ಪಟ್ಟಣದ ರಾಮದಾಸ್ ಹೋಟೆಲ್ ನ ಸುಲೋಚನಮ್ಮ ಸಭಾಂಗಣದಲ್ಲಿ ನಡೆದ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿದ ಅರವಿಂದಕಾರAತ್ ಬ್ರಾಹ್ಮಣ ಸಮಾಜದ ಪುರೋಹಿತರು, ಆಗಮಿಕರು ಬ್ರಾಹ್ಮಣ ಅಭಿವೃದ್ಧಿ ನಿಗಮದ ವತಿಯಿಂದ ಅಗತ್ಯ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಕಿವಿಮಾತು ಹೇಳಿದರು…
ಮುಜರಾಯಿ ದೇವಾಲಯಗಳಲ್ಲಿ ಅರ್ಚಕರಾಗಿ, ಪುರೋಹಿತರಾಗಿ ದೇವರ ಪೂಜೆ ಮಾಡುತ್ತಿರುವ ಬ್ರಾಹ್ಮಣ ಸಮಾಜದ ಬಂಧುಗಳು ಸಂಘಟಿತರಾಗಿ ತಮಗೆ ಸಂವಿಧಾನಬದ್ಧವಾಗಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅರವಿಂದ್ ಮನವಿ ಮಾಡಿದರು.
ಸಮಾಜದ ಬಂಧುಗಳ ಸಹಕಾರದಿಂದ ೨೦೨೧ರ ವಾರ್ಷಿಕ ದಿನಚರಿಯನ್ನು ಬಿಡುಗಡೆವಮಾಡಲಾಗಿದೆ. ಜಾಹಿರಾತುದಾರರು ನೀಡಿರುವ ಹಣದಲ್ಲಿ ನಾಲ್ಕೈದು ಸಾವಿರ ರೂ ಹಣವನ್ನು ಸಂಘಕ್ಕೆ ಉಳಿತಾಯ ಮಾಡಲಾಗಿದೆ. ಸಮಾಜದ ಬಂಧುಗಳು ಸಂಘಟಿತರಾಗಿ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಎನ್. ಅರವಿಂದ ಕಾರಂತ್ ಕರೆ ನೀಡಿದರು…
ಕೆ.ಆರ್.ಪೇಟೆ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಕೆ.ಎನ್. ರಘುರಾಮನಾಡಿಗ್, ಪ್ರಧಾನ ಕಾರ್ಯದರ್ಶಿ ಎಸ್.ಆರ್. ಸುಬ್ಬನರಸಿಂಹ, ಸಹಕಾರ್ಯದರ್ಶಿ ಎಸ್.ಜಿ.ಕುಮಾರಸ್ವಾಮಿ, ಮಹಿಳಾ ಉಪಾಧ್ಯಕ್ಷೆ ಸುಮಾಶ್ರೀನಿವಾಸ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಆರ್.ಹರೀಶ್ ಕುಮಾರ್, ಜಯಸಿಂಹ, ಕೆ.ಎಸ್.ಸುಬ್ರಹ್ಮಣ್ಯ, ಎ.ಕೆ.ರಾಮಕೃಷ್ಣ, ಸವಿತಾ ಸುರೇಶ್, ಮುರುಗೇಶ್ ಮತ್ತಿತರರು ಉಪಸ್ಥಿತರಿದ್ದರು …
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ