May 6, 2024

Bhavana Tv

Its Your Channel

ನಿನ್ನೆ ಸುರಿದ ಭಾರೀ ಮಳೆಗೆ ಕೆ.ಆರ್.ಪೇಟೆ ಪಟ್ಟಣದ ಟಿಎಪಿಸಿಎಂಎಸ್ ಆಡಳಿತ ಕಛೇರಿ ಕೆರೆಯಂಗಳವಾಗಿ ಮಾರ್ಪಡು

ಕೆ.ಆರ್.ಪೇಟೆ: ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಕೆ.ಆರ್.ಪೇಟೆ ಪಟ್ಟಣದ ಟಿಎಪಿಸಿಎಂಎಸ್ ಆಡಳಿತ ಕಛೇರಿಯ ಆವರಣವು ಕೆರೆಯಂಗಳವಾಗಿ ಮಾರ್ಪಟ್ಟಿದೆ .

ಜನಸಾಮಾನ್ಯರು ಪಡಿತರವನ್ನು ಪಡೆದುಕೊಳ್ಳಲು ಸೊಸೈಟಿ ಆವರಣಕ್ಕೆ ಹೋಗಲು, ರಸಗೊಬ್ಬರಗಳನ್ನು ಕೊಳ್ಳಲು ಆಗಮಿಸಿರುವ ರೈತರು ಹಾಗೂ ದ್ವಿಚಕ್ರ ವಾಹನಗಳ ಸವಾರರು ನೀರನ್ನು ದಾಟಿಕೊಂಡು ಹೋಗಲು ಭಾರೀ ಸಾಹಸವನ್ನೇ ಮಾಡುತ್ತಿದ್ದಾರೆ.

ಪ್ರತೀ ಭಾರಿಯೂ ಜೋರಾಗಿ ಮಳೆ ಬಂದರೆ ನೀರು ನಿಂತು ಕೆರೆಯ ಅಂಗಳವಾಗಿ ಬದಲಾಗುವ ಟಿಎಪಿಸಿಎಂಎಸ್ ಸೊಸೈಟಿ ಆವರಣದ ತಗ್ಗನ್ನು ಸರಿಪಡಿಸಿ, ಮಳೆಯ ನೀರು ವ್ಯವಸ್ಥಿತವಾಗಿ ಹೊರಗೆ ಹೋಗುವಂತೆ ಶಾಶ್ವತವಾದ ಕಾಮಗಾರಿಯನ್ನು ಮಾಡಿಸಿ ಆಡಳಿತ ಮಂಡಳಿಯು ಕೂಡಲೇ ಕಾಯಕಲ್ಪ ನೀಡಲು ಮುಂದಾಗಬೇಕು ಎಂದು ಸಾರ್ವಜನಿಕರು ಹಾಗೂ ರೈತಬಾಂಧವರು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಅವರನ್ನು ಆಗ್ರಹಿಸಿದ್ದಾರೆ .

ಇಂದು ಬೆಳಿಗ್ಗೆಯಿಂದಲೇ ರೈತರು ಹಾಗೂ ಸಾರ್ವಜನಿಕರು ಕೆರೆಯ ಅಂಗಳದAತೆ ನಿಂತಿರುವ ನೀರನ್ನು ದಾಟಿಕೊಂಡು ಹೋಗಲು ಭಾರಿ ಸಾಹಸ ಮಾಡುತ್ತಿದ್ದರೆ ಕೆಲವರು ನೀರಿಗೆ ಕಾಲು ಜಾರಿ ಬಿದ್ದು ಬಟ್ಟೆಬರೆಯನ್ನು ಕೆಸರು ಮಾಡಿಕೊಂಡು ಆಡಳಿತ ಮಂಡಳಿಗೆ ಹಿಡಿಶಾಫ ಹಾಕುತ್ತಿದ್ದಾರೆ.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ. ಮಂಡ್ಯ

error: