May 9, 2024

Bhavana Tv

Its Your Channel

ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಸಂದೇಶ ಹಾಗೂ ಜೀವನದ ಆದರ್ಶಗಳು ಸದೃಡ ಸ್ವಾಭಿಮಾನಿ ಬದುಕಿಗೆ ದಾರಿದೀಪವಾಗಿವೆ- ಪುರಸಭೆ ಅಧ್ಯಕ್ಷೆ ಮಹಾದೇವಿನಂಜುOಡ

ಕೆ.ಆರ್.ಪೇಟೆ ಪಟ್ಟಣದ ಪುರಸಭೆಯ ಕಾರ್ಯಾಲಯದಲ್ಲಿ ಆದಿಕವಿ, ಮಹರ್ಷಿ ವಾಲ್ಮೀಕಿಯವರ ಜಯಂತ್ಯೋತ್ಸವ ಸಮಾರಂಭವು ಅಧ್ಯಕ್ಷೆ ಮಹಾದೇವಿನಂಜುAಡ, ಉಪಾಧ್ಯಕ್ಷೆ ಗಾಯತ್ರಿ ಮತ್ತು ಮುಖ್ಯಾಧಿಕಾರಿ ಕುಮಾರ್ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂಧಿಗಳ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ನಡೆಯಿತು…

ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಮಾನವೀಯ ಸಂಬAಧಗಳು ಹಾಗೂ ಜೀವನ ಮಾರ್ಗದ ಮೇಲೆ ಬೆಳಕು ಚೆಲ್ಲುವ ರಾಮಾಯಣ ಗ್ರಂಥವನ್ನು ರಚಿಸಿ ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಬೇಡರ ಕುಲದಲ್ಲಿ ಜನಿಸಿದರೂ ಆತ್ಮಪರಿವರ್ತನೆಯ ಮೂಲಕ ರಾಮಾಯಣ ಗ್ರಂಥವನ್ನು ರಚಿಸಿ ನಮ್ಮ ಸಂಬAಧಗಳ ಮೌಲ್ಯಗಳನ್ನು ನಾಡಿಗೆ ತೋರಿಸಿಕೊಟ್ಟಿದ್ದಾರೆ ಎಂದು ಸ್ಮರಿಸಿದ ಮಹಾದೇವಿ ರಾಮಾಯಣ ಹಾಗೂ ಮಹಾಭಾರತ ಗ್ರಂಥಗಳು ನಮ್ಮ ಆದರ್ಶ ಬದುಕಿಗೆ ದಾರಿಮಾರ್ಗವಾಗಿವೆ ಎಂದು ಗುಣಗಾನ ಮಾಡಿದರು…

ಪುರಸಭೆ ಉಪಾಧ್ಯಕ್ಷೆ ಗಾಯತ್ರಿ, ಮುಖ್ಯಾಧಿಕಾರಿ ಕುಮಾರ್ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಸಾಧನೆ, ಸಾಮಾಜಿಕ ಸಂದೇಶಗಳ ಬಗ್ಗೆ ಮಾತನಾಡಿದರು..
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಕೆ.ಬಿ.ಮಹೇಶ್, ಕೆ.ಆರ್.ರವೀಂದ್ರಬಾಬೂ, ಪಂಕಜಾಪ್ರಕಾಶ್, ಇಂದ್ರಾಣಿ ವಿಶ್ವನಾಥ, ಶೋಭಾ ದಿನೇಶ್, ಕೆ.ಎಸ್.ಪ್ರಮೋದ್, ಹೆಚ್.ಎನ್.ಪ್ರವೀಣ್, ಸೌಭಾಗ್ಯ ಉಮೇಶ್, ಸುಗುಣಾರಮೇಶ್, ಡಿ.ಪ್ರೇಮಕುಮಾರ್ ಮತ್ತು ಕಛೇರಿಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಮಾಹಿತಿಗಾಗಿ.

ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ , ಮಂಡ್ಯ

error: